Connect with us

    LATEST NEWS

    ಜೀವಕ್ಕೆ ಕುತ್ತು ತಂದ ಮೊಬೈಲ್ ಗೇಮ್ಸ್

    ಜೀವಕ್ಕೆ ಕುತ್ತು ತಂದ ಮೊಬೈಲ್ ಗೇಮ್ಸ್

    ಉಡುಪಿ ಅಕ್ಟೋಬರ್ 14: ಬಾವಿಕಟ್ಟೆಯಲ್ಲಿ ಕೂತು ಮೊಬೈಲ್ ಫೋನ್ ನಲ್ಲಿ ಗೇಮ್ಸ್ ಆಡುವುದರಲ್ಲಿ ತಲ್ಲೀನನಾಗಿದ್ದ ವೇಳೆ ಆಕಸ್ಮಿಕವಾಗಿ ಬಾವಿಗೆ ಬಿದ್ದ ಯುವಕನೋರ್ವ ಸಾವಪ್ಪಿದ ಘಟನೆ ನಡೆದಿದೆ.

    ಬಸ್ರೂರು ಗುಂಡಿಗೋಳಿ ಬೈಲ್ ಮನೆ ಶೀನ ಪೂಜಾರಿಯವರ ಮಗ ಭಾಸ್ಕರ ಪೂಜಾರಿ (21) ಮೃತ ಯುವಕ ಎಂದು ಗುರುತಿಸಲಾಗಿದೆ.
    ಮೃತ ಯುವಕ ಭಾಸ್ಕರ ಅವರಿಗೆ ಮೊಬೈಲ್ ನಲ್ಲಿ ಗೇಮ್ ಆಡುವುದು ಇಷ್ಟದ ಹವ್ಯಾಸವೆನ್ನಲಾಗಿತ್ತು. ಅದರಂತೆ ಭಾಸ್ಕರ್ ಸ್ಥಳೀಯ ಬಾವಿಕಟ್ಟೆಯಲ್ಲಿ ಮೊಬೈಲ್ ಆಟದಲ್ಲಿ ನಿರತನಾಗಿದ್ದಾಗ ಸಂದರ್ಭ ಈ ದುರ್ಘಟನೆ ಸಂಭವಿಸಿದೆ.

    ಭಾಸ್ಕರ ಪೂಜಾರಿಯ ಸಹೋದರ ರಾಘವೇಂದ್ರ ನೀಡಿದ ದೂರಿನಂತೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply