LATEST NEWS
ಕುಂದಾಪುರ – ಹೊಳೆಗೆ ಬಿದ್ದು ಯುವಕರಿಬ್ಬರ ಸಾವು
ಕುಂದಾಪುರ ಅಗಸ್ಟ್ 24: ಕೂಲಿ ಕೆಲಸ ಮಾಡುತ್ತಿದ್ದ ಇಬ್ಬರು ಯುವಕರು ಆಕಸ್ಮಿಕವಾಗಿ ಹೊಳೆ ಬಿದ್ದ ಪರಿಣಾಮ ಸಾವನಪ್ಪಿರುವ ಘಟನೆ ಆರ್ಡಿ ಕೊಂಜಾಡಿ ಗಂಟುಬೀಳು ಚಕ್ಕರ್ಮಕ್ಕಿ ಸಮೀಪ ನಡೆದಿದೆ.
ಮೃತರನ್ನು ಮೋಹನ ನಾಯ್ಕ (21), ಸುರೇಶ (19) ಎಂದು ಗುರುತಿಸಲಾಗಿದ್ದು. ಇಬ್ಬರು ಹತ್ತಿರದ ಸಂಬಂಧಿಗಳಾಗಿದ್ದರು. ಇಬ್ಬರೂ ಕೊಂಜಾಡಿ ಗಂಟುಬೀಳು ಪರಿಸರಕ್ಕೆ ಸೋಮವಾರ ಕೂಲಿ ಕೆಲಸಕ್ಕೆ ಹೋಗಿದ್ದರು. ಹೊತ್ತು ಕಳೆದರೂ ಮನೆಗೆ ಬಾರದ ಹಿನ್ನೆಲೆಯಲ್ಲಿ ಮನೆಯವರು ಹೊಳೆ ಸಮೀಪ ಹುಡುಕಿದಾಗ ಇಬ್ಬರ ಬಟ್ಟೆ ಹಾಗೂ ಚಪ್ಪಲಿ ಕಾಣಸಿಕ್ಕಿದೆ.
ಮಧ್ಯಾಹ್ನ ಊಟದ ಬಳಿಕ ಸಮೀಪದಲ್ಲಿ ಹರಿಯುತ್ತಿದ್ದ ಕುಂಟುಹೊಳೆ ಕುಪ್ಪರಿಗೆಗುಂಡಿ ಎಂಬಲ್ಲಿ ಸ್ನಾನಕ್ಕೆ ನೀರಿಗಿಳಿದಿದ್ದರು ಎನ್ನಲಾಗಿದೆ. ಈಜಲು ಬಾರದೇ ಆಕಸ್ಮಿಕವಾಗಿ ಆಳವಾದ ನೀರಿನ ಗುಂಡಿಗೆ ಬಿದ್ದು ಸಾವನ್ನಪ್ಪಿರುವ ಅಂದಾಜಿನ ಮೇರೆಗೆ ಸ್ಥಳೀಯರು ಹೊಳೆಯಲ್ಲಿ ಹುಡುಕಾಟ ನಡೆಸಿದಾಗ ನೀರಿನಲ್ಲಿ ಶವ ಪತ್ತೆಯಾಗಿದೆ. ಇಬ್ಬರ ಬಾಯಿ ಭಾಗಕ್ಕೆ ನೀರಿನೊಳಗೆ ಕಲ್ಲು ತಾಗಿದ ಪರಿಣಾಮ ಗಾಯವಾಗಿದೆ. ಶಂಕರನಾರಾಯಣ ಎಸ್ಐ ಶ್ರೀ ಧರ ನಾಯ್ಕ ಹಾಗೂ ಸಿಬ್ಬಂದಿ ಸ್ಥಳಕ್ಕಾಗಮಿಸಿ ಮಹಜರು ನಡೆಸಿದರು.
You must be logged in to post a comment Login