Connect with us

    DAKSHINA KANNADA

    ಮಾಸ್ಕ್ ಹಾಕದ್ದನ್ನು ಪ್ರಶ್ನಿಸಿದ ಪಿಡಿಒ ಮೇಲೆ ಹಲ್ಲೆ

    ಮಂಗಳೂರು, ಮೇ 25 : ಮಾಸ್ಕ್ ಧರಿಸದೇ ಇರುವುದನ್ನು ಪ್ರಶ್ನಿಸಿದ ಮಂಗಳೂರಿನ ಮಲ್ಲೂರು ಗ್ರಾಮ ಪಂಚಾಯತ್​​ ಪಿಡಿಒ ಮೇಲೆ ಹಲ್ಲೆ ನಡೆಸಿದ ಘಟನೆ ನಡೆದಿದೆ.

    ಮಲ್ಲೂರು ಗ್ರಾಮ ಪಂಚಾಯತ್​ನ ಪಿಡಿಒ ರಾಜೇಂದ್ರ ಶೆಟ್ಟಿ ಅವರು ಮಲ್ಲೂರು ಬಳಿ ಬದ್ರಿಯಾನಗರದ ಕ್ರಿಕೆಟ್ ಮೈದಾನದಲ್ಲಿ ಗುಂಪು ಸೇರಿದ್ದ ಯುವಕರಿಗೆ ಮಾಸ್ಕ್ ಹಾಕಲು ಸೂಚಿಸಿದ್ದರು.

    ಬಳಿಕ ಇದೇ ಯುವಕರು ಮಲ್ಲೂರು ಗ್ರಾಮ ಪಂಚಾಯತ್ ಆವರಣದಲ್ಲಿ ಸೇರಿದ್ದು, ಅಲ್ಲಿಯೂ ಅವರು ಮಾಸ್ಕ್ ಹಾಕದೇ ಗುಂಪು – ಗುಂಪಾಗಿದ್ದನ್ನು ಪ್ರಶ್ನಿಸಿದರು. ಈ ವೇಳೆ ಯುವಕರಿಬ್ಬರು ಪಿಡಿಒ ಮೇಲೆ ಹಲ್ಲೆ ನಡೆಸಿದ್ದಾರೆ. ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply