ಬೆಂಗಳೂರು, ಡಿಸೆಂಬರ್ 30: ಹೊಸ ವರ್ಷದ ಸಡಗರದ ನಡುವೆ ಹೈದರಾಬಾದ್ನ ಯುವತಿ ಶ್ರೇಯಾ ಅನ್ನೋಳು ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಾಳೆ.
ಹೊಸ ವರ್ಷದ ಸಂಕಲ್ಪಗಳಲ್ಲಿ ಬೆಂಗಳೂರನ್ನ ತೊರೆಯೋದು ನನ್ನ ಮೊದಲ ಆಯ್ಕೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಘೋಷಿಸಿ, ಬೆಂಗಳೂರಿಗರ ಆಕ್ರೋಶಕ್ಕೆ ಕಾರಣವಾಗಿದ್ದಾಳೆ. ಬೆಂಗಳೂರನ್ನ ಬಿಟ್ಟು ಹೋಗ್ತಿರೋದು ಈ ವರ್ಷ ಮಾಡಿದ ಬೆಸ್ಟ್ ಡಿಸಿಷನ್. ಬೆಂಗಳೂರುಗಿಂತ ಹೈದ್ರಾಬಾದ್ ಸೂಪರ್ ಎಂದು ಎಕ್ಸ್ ನಲ್ಲಿ ಯುವತಿ ಪೋಸ್ಟ್ ಮಾಡಿದ್ದಾಳೆ.
ಆಕೆಯ ಕಾರಣಗಳು
- ರಸ್ತೆ ಗುಂಡಿಗಳ ಸಮಸ್ಯೆ ಇದೆ
- ಸ್ವಲ್ಪ ದೂರ ಟ್ರಾವೆಲ್ ಮಾಡೋಕೂ ಜಾಸ್ತಿ ಟೈಮ್ ಬೇಕು
- ಒಂದು ಬಾರಿ ಕ್ಯಾಬ್ ಬುಕ್ ಮಾಡೋಕು ಹೆಚ್ಚಿನ ಸಮಯ ಬೇಕು
- ನೀರಿನ ಸಮಸ್ಯೆ
- ಕಳಪೆ ಆಹಾರ
- ದುಬಾರಿ ಜೀವನ
ಹೀಗೆ ಎಕ್ಸ್ ನಲ್ಲಿ ಪೋಸ್ಟ್ ಹಾಕಿರೋ ಯುವತಿ ಶ್ರೇಯ
ಹೈದರಾಬಾದ್ನಲ್ಲಿ ಜೀವನ ನೆಮ್ಮದಿಯಾಗಿದೆ. ಆರಾಮಾಗಿರ್ತೀನಿ ಎಂದು ಪೋಸ್ಟ್ ಮಾಡಿರುವ ಶ್ರೇಯಾ ಪೋಸ್ಟ್ಗೆ ಆಕ್ರೋಶ ವ್ಯಕ್ತವಾಗಿದೆ. ಕೆಲವರು ನೀವು ಇಲ್ಲಿ ಇರೋದಕ್ಕಿಂತ ಅಲ್ಲಿಗೆ ಹೋಗೋದೇ ಬೆಸ್ಟ್. ಇಲ್ಲಿನ ಅನ್ನ ತಿಂದು ಹೋಗುವಾಗ ಬೆಂಗಳೂರಿಗೆ ಅವಮಾನ ಮಾಡಬೇಡಿ ಎಂದು ಕ್ಲಾಸ್ ತೆಗೆದುಕೊಂಡಿದ್ದಾರೆ.



