Connect with us

    LATEST NEWS

    ದುಬಾರಿ ಮೌಲ್ಯದ ಮದ್ಯ ಬಿಟ್ಟು ಕಡಿಮೆ ಬೆಲೆ ಮದ್ಯ ಕೊಂಡೊಯ್ದ ಕಳ್ಳರು

    ದುಬಾರಿ ಮೌಲ್ಯದ ಮದ್ಯ ಬಿಟ್ಟು ಕಡಿಮೆ ಬೆಲೆ ಮದ್ಯ ಕೊಂಡೊಯ್ದ ಕಳ್ಳರು

    ಮಂಗಳೂರು ಎಪ್ರಿಲ್ 3: ಕರಾವಳಿಯಲ್ಲಿ ಮದ್ಯ ಸಿಗದೇ ಆತ್ಮಹತ್ಯೆಗಳ ಉಂಟಾಗುತ್ತಿರುವ ನಡುವೆ ಈಗ ಮದ್ಯದಂಗಡಿಗಳಲ್ಲಿ ಕಳ್ಳತನಕ್ಕೆ ಮುಂದಾಗಿದ್ದು, ಇಂತಹದೊಂದು ಘಟನೆ ಮಂಗಳೂರಿನ ಹೊರವಲಯದ ದೇರಳಕಟ್ಟೆ ಎಂಬಲ್ಲಿ ನಡೆದಿದೆ.

    ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಲಾಕ್‌ ಔಟ್‌ ಆಗಿದ್ದನ್ನೇ ಬಂಡವಾಳ ಮಾಡಿಕೊಂಡ ಕಳ್ಳರು ಮಂಗಳೂರು ಹೊರವಲಯದ ದೇರಳಕಟ್ಟೆಯ ಕುಕ್ಕುದಕಟ್ಟೆಯ ವೈನ್‌ ಶಾಪ್‌ವೊಂದಕ್ಕೆ ನುಗ್ಗಿ ಅಪಾರ ಮೌಲ್ಯದ ಮದ್ಯವನ್ನು ದೋಚಿದ್ದಾರೆ.

    ಕುಕ್ಕುದಕಟ್ಟೆಯ ಸರ್ಕಾರಿ ಸೌಮ್ಯದ ಎಂಎಸ್‌ಐಎಲ್‌ ವೈನ್‌ ಶಾಪ್‌ಗೆ ಶಟರ್ ಮುರಿದು ನುಗ್ಗಿದ ಕಳ್ಳರು ಮದ್ಯ ಮಾತ್ರವಲ್ಲ ಅಲ್ಲಿದ್ದ ಸಿಸಿ ಕ್ಯಾಮರಾದ ಡಿವಿಆರ್‌ ಅನ್ನು ಕೂಡಾ ಹೊತ್ತೊಯ್ದಿದ್ದಾರೆ. ವಿಶೇಷ ವೆಂದರೆ ಕಳ್ಳರು ಬೆಲೆ ಬಾಳುವ ಮೌಲ್ಯದ ಮದ್ಯವನ್ನು ಅಲ್ಲೇ ಬಿಟ್ಟು ಕಡಿಮೆ ಬೆಲೆಯ ಮದ್ಯವನ್ನು ಮಾತ್ರ ಕಳವುಗೈಯ್ದಿದ್ದಾರೆ. ಈ ಬಗ್ಗೆ ಕೊಣಾಜೆ ಪೊಲೀಸರು ಪ್ರಕರಣ ದಾಖಲು ಮಾಡಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply