DAKSHINA KANNADA
‘ಮಂಗಳೂರಿನವರ ಸೊಕ್ಕು ಮುರಿಯಬೇಕು’ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ, ಆಡಿಯೋ ವೈರಲ್
ಮಂಗಳೂರು, ಜೂನ್ 28 : ಟ್ರೆಂಡಿಂಗ್ ನಲ್ಲಿ ಇರುವ ಕ್ಲಬ್ ಹೌಸ್ ಅಪ್ಲಿಕೇಶನ್ ನಲ್ಲಿ ಮಂಗಳೂರಿಗರ ಮೇಲೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಘಟನೆ ನಡೆದಿದೆ. ‘ನಮ್ಮೂರಲ್ಲಿ ದೇವಸ್ಥಾನಗಳಿಲ್ವಾ, ನಮಗೆ ಮನೆ ದೇವರಿಲ್ಲವೇ. ಅದನ್ನು ಬಿಟ್ಟು ಧರ್ಮಸ್ಥಳ, ಸುಬ್ರಹ್ಮಣ್ಯ ಹೋಗುವುದನ್ನು ಮೊದಲು ನಿಲ್ಲಿಸಬೇಕು. ಮಂಗಳೂರಿಗರ ಸೊಕ್ಕು ಮುರಿಯಬೇಕು ಎಂದು ಕರುನಾಡು-ತುಳುನಾಡು ಎಂಬ ಕ್ಲಬ್ ಹೌಸ್ನಲ್ಲಿ ನಡೆಯುತ್ತಿದ್ದ ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಕನ್ನಡ ವಾಹಿನಿಗಳಲ್ಲಿ ಕರಾವಳಿಗರು ಮೆರೆಯುತ್ತಿದ್ದಾರೆ. ಯಾವಾಗ ಅನುಶ್ರೀ ಝೀ ಕನ್ನಡಕ್ಕೆ ಬಂದರೋ ಅಂದಿನಿಂದ ಕನ್ನಡ ವಾಹಿನಿಗಳಲ್ಲಿ ಕನ್ನಡಿಗರು ತುಂಬಿಕೊಂಡಿದ್ದಾರೆ. ಅವರನ್ನು ಮೊದಲು ಹೊರಗಿಡಬೇಕು ಎಂದು ಶರತ್ ಕುಮಾರ್ ಎಂಬಾತ ಕ್ಲಬ್ ಹೌಸ್ನಲ್ಲಿ ನಡೆದ ಚರ್ಚೆಯಲ್ಲಿ ಮಾತನಾಡಿದ್ದಾನೆ.
ಕರಾವಳಿ ಕಡೆಗೆ ಟ್ರಿಪ್ ಹೋಗುವುದನ್ನು ಎಲ್ಲಿಯವರೆಗೆ ನಿಲ್ಲಿಸುವುದಿಲ್ಲ, ಅಲ್ಲಿಯವರೆಗೆ ಮಂಗಳೂರಿಗರ ಸೊಕ್ಕು ಮುರಿಯುವುದಿಲ್ಲ. ಮಂಜುನಾಥ ಸ್ವಾಮಿ ದೇವಸ್ಥಾನ ನಿಮ್ಮಲ್ಲೇ ಕಟ್ಟಿಕೊಳ್ಳಿ ಸಾರ್ ಯಾರು ಬೇಡ ಅಂತಾರೆ. ಅದು ಬಿಟ್ಟು ಕರಾವಳಿಗೆ ಯಾಕೆ ಹೋಗ್ತೀರಾ ಎಂದು ಪ್ರಶ್ನಿಸಿದ್ದಾನೆ. ಹೀಗೆ ಕರಾವಳಿಗರ ಬಗ್ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಆಡಿಯೋ ವೈರಲ್ ಆಗುತ್ತಿದೆ. ಈ ಆಡಿಯೋ ಬಗ್ಗೆ ಕರಾವಳಿಗರು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
Video:
You must be logged in to post a comment Login