LATEST NEWS
ಲಾಕ್ ಡೌನ್ ನಲ್ಲಿ ಜನರನ್ನು ಕರೆತಂದು ಪೋಟೋಗೆ ಪೋಸ್ ಕೊಟ್ಟಿದ್ದು ಯಾರು…!!
ಲಾಕ್ ಡೌನ್ ನಲ್ಲಿ ಜನರನ್ನು ಕರೆತಂದು ಪೋಟೋಗೆ ಪೋಸ್ ಕೊಟ್ಟಿದ್ದು ಯಾರು…!!
ಮಂಗಳೂರು ಜೂ 1: ಕರೊನಾ ಸಂದರ್ಭದಲ್ಲಿ ಲಾಕ್ ಡೌನ್ ಮಾಡಿರುವ ಕ್ರಮದ ಬಗ್ಗೆ ಮಾಜಿ ಸಚಿವ ಕಾಂಗ್ರೆಸ್ ನಾಯಕ ಯು ಟಿ ಖಾದರ್ ಟೀಕೆ ಮಾಡುತ್ತಿರುವ ಬಗ್ಗೆ ವಿವರಿಸಿದ ಅವರು ಖಾದರ್ ಒಂದೊಂದು ಬಾರಿ ಒಂದೊಂದು ಹೇಳಿಕೆ ನೀಡುತ್ತಿದ್ದಾರೆ.
ಲಾಕ್ ಡೌನ್ ಸಂಪೂರ್ಣ ನಿರ್ಬಂಧ ಮಾಡಬೇಕು ಎಂದು ಹೇಳುವವರೂ ಅವರೇ, ಇನ್ನು ಲಾಕ್ ಡೌನ್ ಇದ್ದಾಗ ನಿಯಮ ಮುರಿದು ಜನರನ್ನು ಕರೆದುಕೊಂಡು ಫೋಟೋಗಳಿಗೆ ಫೋಸು ಕೊಟ್ಟು ಪ್ರಚಾರ ಪಡೆದುಕೊಳ್ಳುವವರೂ ಅವರೇ. ಹೀಗಾಗಿ ಹೇಳಿಕೆ ನೀಡುವ ಮುನ್ನ ಓರ್ವ ಜವಾಬ್ದಾರಿಯುತ ಸ್ಥಾನದಲ್ಲಿರುವ ಅವರು ಸ್ವಲ್ಪ ಎಚ್ಚರಿಕೆಯಿಂದ ಹೇಳಿಕೆ ನೀಡಬೇಕು ಎಂದರು.
ಇನ್ನು ಲಾಕ್ ಡೌನ್ ನಿಂದ ದೇವಾಲಯಗಳ ಆದಾಯ ಸಂಪೂರ್ಣ ಕುಸಿತವಾಗಿದ್ದು, ರಾಜ್ಯಕ್ಕೆ ದೇವಾಲಯಗಳ ಒಟ್ಟು 600 ಕೋಟಿಗೂ ಅಧಿಕ ಆದಾಯ ಬರುತ್ತಿತ್ತು, ಆದರೆ ಲಾಕ್ ಡೌನ್ ನಿಂದಾಗಿ ಒಟ್ಟು ಆದಾಯದಲ್ಲಿ 30ರಿಂದ 35 ಶೇಕಡಾ ಕಡಿಮೆ ಆದಾಯ ಬರುತ್ತಿದೆ ಎಂದು ಮುಜರಾಯಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಹೇಳಿದ್ದಾರೆ.
You must be logged in to post a comment Login