Connect with us

    DAKSHINA KANNADA

    ವಾಟ್ಸಪ್ ನಲ್ಲಿ ಅಯೋಧ್ಯೆ ಶ್ರೀರಾಮ ಮಂದಿರ ಸ್ಟೇಟಸ್ ಹಾಕಿದ್ದಕ್ಕೆ ಹಲ್ಲೆಗೆ ಮುಂದಾದ ದುಷ್ಕರ್ಮಿಗಳು

    ಉಪ್ಪಿನಂಗಡಿ: ಮಾರ್ಚ್ 4: ವಾಟ್ಸಪ್ ನಲ್ಲಿ ಅಯೋಧ್ಯೆ ರಾಮಮಂದಿರ ಕುರಿತಾದ ಸ್ಟೇಟಸ್ ಹಾಕಿದ್ದಕ್ಕೆ ದುಷ್ಕರ್ಮಿಗಳ ಗುಂಪೊಂದು ಸ್ಟೇಟಸ್ ಹಾಕಿದವರ ಮನೆ ನುಗ್ಗಿ ಹಲ್ಲೆಗೆ ಯತ್ನಿಸಿದ ಘಟನೆ ಉಪ್ಪಿನಂಗಡಿ ಸಮೀಪದ 34ನೇ ನೆಕ್ಕಿಲಾಡಿ ಗ್ರಾಮದ ಆದರ್ಶ ನಗರದಲ್ಲಿ ಮಂಗಳವಾರ ರಾತ್ರಿ ನಡೆದಿದೆ.

    ಇಲ್ಲಿನ ಮುಕುಂದ ಅವರ ಮನೆಗೆ ನುಗ್ಗಿದ ಉಬೇದ್‌ ಮತ್ತು ಆತನ ಸಹಚರರ ತಂಡ ಅವಾಚ್ಯ ಪದಗಳಿಂದ ನಿಂದಿಸಿ ಹಲ್ಲೆಮಾಡಿದೆ ಎಂದು ಗಾಯಾಳು ಮುಕುಂದ ಆಸ್ಪತ್ರೆಗೆ ದಾಖಲಾಗಿ ಪೊಲೀಸ್‌ ದೂರು ನೀಡಿದ್ದಾರೆ.

    ಮುಕುಂದ ತಮ್ಮ ಮೊಬೈಲ್‌ನವ್ಯಾಟ್ಸ್ಯಾಪ್‌ ಅಯೋಧ್ಯಾ ಶ್ರೀರಾಮ ಮಂದಿರದ ಬಗ್ಗೆ ಸ್ಟೇಟಸ್‌ ಹಾಕಿದ್ದು, ಇದನ್ನು ಆಕ್ಷೇಪಿಸಿದ ತಂಡ ದಾಳಿ ಮಾಡಿ ಹಲ್ಲೆ ನಡೆಸಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ರಾತ್ರಿ ಹೊತ್ತು ಮನೆಗೆ ದಾಳಿ ಮಾಹಿತಿ ಸಿಕ್ಕಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಪೊಲೀಸರು ಗುಂಪನ್ನು ಚದುರಿಸಿ ದೂರು ದಾಖಲಿಸಿಕೊಂಡಿದ್ದಾರೆ.

    ಮನೆಯ ಮುಂದೆ ಜನ ಜಮಾಯಿಸಿ ಅವಾಚ್ಯ ಪದಗಳಿಂದ ಬೈಯ್ಯುವುದು ಮತ್ತು ಮನೆಯ ಗೇಟನ್ನು ಹಾನಿಗೊಳಿಸುತ್ತಿರುವ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply