Connect with us

    LATEST NEWS

    ಕೊರೊನಾ ಚಿಕಿತ್ಸೆಯಲ್ಲಿ ನಿರ್ಲಕ್ಷ್ಯ ವೆನ್ಲಾಕ್ ಆಸ್ಪತ್ರೆ ಡಿ.ಎಂ.ಓ ಡಾ.ರಾಜೇಶ್ವರಿದೇವಿ ಎತ್ತಂಗಡಿ

    ಕೊರೊನಾ ಚಿಕಿತ್ಸೆಯಲ್ಲಿ ನಿರ್ಲಕ್ಷ್ಯ ವೆನ್ಲಾಕ್ ಆಸ್ಪತ್ರೆ ಡಿ.ಎಂ.ಓ ಡಾ.ರಾಜೇಶ್ವರಿದೇವಿ ಎತ್ತಂಗಡಿ

    ಮಂಗಳೂರು ಮಾರ್ಚ್ 27: ಕೊನೆಗೂ ವೆನ್ಲಾಕ್ ಕರ್ಮಕಾಂಡದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದ ಆಡಿಯೋ ನಿಜವಾಗಿದೆ. ಕೊರೊನಾ ಚಿಕಿತ್ಸೆಯಲ್ಲಿ ನಿರ್ಲಕ್ಷ್ಯ ವೆನ್ಲಾಕ್ ಆಸ್ಪತ್ರೆ ಡಿ.ಎಂ.ಓ ಡಾ.ರಾಜೇಶ್ವರಿದೇವಿ ಎತ್ತಂಗಡಿ ಮಾಡಿ ರಾಜ್ಯ ಸರಕಾರ ಆದೇಶಿಸಿದೆ.

    ಈಗ ಡಾ.ರಾಜೇಶ್ವರಿದೇವಿ ಅವರನ್ನು ಬಂಟ್ವಾಳ ತಾಲೂಕು ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿಯಾಗಿ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.ಬಂಟ್ವಾಳ ತಾಲೂಕು ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿಯಾಗಿದ್ದ ಡಾ.ಸದಾಶಿವ ಅವರನ್ನು ವೆನ್ಲಾಕ್ ನ ಮುಖ್ಯ ಡಿ.ಎಂ.ಓ ಆಗಿ ನೇಮಕ ಮಾಡಲಾಗಿದೆ.

    ಸಾರ್ವಜನಿಕ ಹಿತದೃಷ್ಟಿಯಿಂದ ವರ್ಗಾವಣೆ ಅಂತಾ ನಮೂದಿಸಲಾಗಿದೆ. ದಕ್ಷಿಣ ಕನ್ನಡದಲ್ಲಿ ಮಹಾಮಾರಿ ಕೊರೋನಾ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ವೆನ್ಲಾಕ್‌ ಆಸ್ಪತ್ರೆಯನ್ನು ಕೊರೋನಾ ಆಸ್ಪತ್ರೆಯನ್ನಾಗಿ ಮಾರ್ಪಾಡು ಗೊಳಿಸಿದ ರಾಜ್ಯ ಸರ್ಕಾರ ಹಿರಿಯ ದಕ್ಷ ಅಧಿಕಾರಿ ಪೊನ್ನುರಾಜ್‌ ಅವರನ್ನು ನೇಮಕ ಮಾಡಿದ ಕೆಲವೇ ಗಂಟೆಗಳಲ್ಲಿ ಡಾ, ರಾಜೇಶ್ವರಿ ದೇವಿಯ ಎತ್ತಂಗಡಿ ಆಗಿದೆ.

    ಕಳೆದ ಏಳು ವರ್ಷಗಳಂದ ರಾಜೇಶ್ವರಿ ದೇವಿ ವೆನ್ಲಾಕ್‌ ಆಸ್ಪತ್ರೆಯ ಅಧಿಕ್ಷಕಿಯಾಗಿದ್ದರು. ಕೋರೋನಾ ಚಿಕಿತ್ಸೆ ಸಂಬಂಧ ಇತ್ತೀಚೆಗೆ ವೆನ್ಲಾಕ್ ಆಸ್ಪತ್ರೆಯ ಎನ್ನಲಾಗಿದ್ದ ಆಡಿಯೋ ಒಂದು ಭಾರಿ ಸುದ್ದಿ ಆಗಿ ಡಾ . ರಾಜೇಶ್ವರಿ ದೇವಿ ಚರ್ಚೆಗೆ ಗ್ರಾಸವಾಗಿದ್ದರು.ಕೊರೋನಾ ರೋಗಿಗಳ ಬಗ್ಗೆ ನಿರ್ಲಕ್ಷ್ಯ ತೋರಿದ್ದರು ಎಂದು ಆಡಿಯೋದಲ್ಲಿ ನಮೂದು ಆಗಿತ್ತು.

    Share Information
    Advertisement
    Click to comment

    You must be logged in to post a comment Login

    Leave a Reply