Connect with us

    LATEST NEWS

    ವಿಕೇಂಡ್ ಲಾಕ್ ಡೌನ್ ಉಡುಪಿ, ಮಂಗಳೂರು ಸಂಪೂರ್ಣ ಬಂದ್…!!

    ಮಂಗಳೂರು ಎಪ್ರಿಲ್ 24: ಕೊರೊನಾ ಎರಡನೇ ಅಲೆ ಹಿನ್ನಲೆ ವಿಕೇಂಡ್ ಲಾಕ್ ಡೌನ್ ಘೋಷಿಸಿರುವ ರಾಜ್ಯಸರಕಾರ ಆದೇಶದನ್ವಯ ಇಂದು ಉಡುಪಿ ಹಾಗೂ ದಕ್ಷಣಕನ್ನಡ ಜಿಲ್ಲೆ ಸಂಪೂರ್ಣ ಸ್ತಬ್ದವಾಗಿದೆ. ವಿಕೇಂಡ್ ಲಾಕ್ ಡೌನ್ ಹಿನ್ನಲೆ ನಿನ್ನೆ ರಾತ್ರಿಯಿಂದಲೇ ಪೊಲೀಸರು ಬಿಗಿ ಪೊಲೀಸ್ ಬಂದೋಬಸ್ತ್ ನಡೆಸಿದ್ದರು. ಇನ್ನು ಬೆಳಿಗ್ಗೆ ಅಗತ್ಯವಸ್ತುಗಳ ಖರೀದಿ ನಂತರ ಜನ ಸಂಚಾರ ಸಂಪೂರ್ಣ ಸ್ತಬ್ದವಾಗಿದ್ದು, ಮಂಗಳೂರಿನ ರಸ್ತೆಗಳು ಖಾಲಿ ಹೊಡೆಯುತ್ತಿವೆ.


    ಮಂಗಳೂರು ಕಮಿಷನರೇಟ್ ವ್ಯಾಪ್ತಿಯ ಆಯಾ ಕಟ್ಟಿನ ಸ್ಥಳಗಳಲ್ಲಿ ಬ್ಯಾರಿಕೇಡ್ ಹಾಕಿ ಸಂಚಾರ ತಡೆ ಹಿಡಿಯಲಾಗಿದ್ದು, ಅನಗತ್ಯವಾಗಿ ಓಡಾಡುವವ ಮೇಲೆ ಪೊಲೀಸ್ ಕ್ರಮ ಕೈಗೊಳ್ಳಲಾಗುತ್ತಿದೆ. ನಗರದಲ್ಲಿ ಒಟ್ಟಾರೆ 54 ಚೆಕ್ ಪೋಸ್ಟ್ ಗಳು ನಿರ್ಮಿಸಲಾಗಿದ್ದು ಪ್ರತಿ ಚೆಕ್ ಪೋಸ್ಟ್ ನಲ್ಲೂ 6 ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. 35 ಮೊಬೈಲ್ ಸ್ಕಾಡ್ ಗಳು, ಸಾವಿರಕ್ಕೂ ಅಧಿಕ ಸಿಬ್ಬಂದಿ , ಕೊವೀಡ್ ಮಾರ್ಷಲ್ ನೇಮಕ ಮಾಡಲಾಗಿದೆ.


    ಇನ್ನು ಉಡುಪಿಯು ಸಂಪೂರ್ಣ ಸ್ಥಬ್ದ‌ವಾಗಿದ್ದು, ಜನರಿಲ್ಲದೇ ರಸ್ತೆಗಳೆಲ್ಲವೂ ಬಿಕೋ ಎನ್ನುತ್ತಿದ್ದು, ಅಗತ್ಯ‌ ವಸ್ತುಗಳ ಅಂಗಡಿ ಹೊರತುಪಡಿಸಿ ಬೇರೆಲ್ಲಾ ಬಂದ್ ಮಾಡಲಾಗಿದೆ. ಇನ್ನು ಹಾಲು, ದಿನಸಿ, ಮೆಡಿಕಲ್ ಶಾಪ್ ಹೊರತುಪಡಿಸಿ ಬೇರೆಲ್ಲಾ ಅಂಗಡಿ ಮುಂಗಟ್ಟುಗಳು ಬಂದ್ ಆಗಿದ್ದು, ದೂರದೂರಿನ ಬಸ್ಸುಗಳಿಗೆ ಮಾತ್ರ ಸಂಚರಿಸಲು ಅವಕಾಶ ನೀಡಲಾಗಿದ್ದು, ಮೈಸೂರು, ಬೆಂಗಳೂರು, ಹಾವೇರಿ, ಶಿವಮೊಗ್ಗ ಕ್ಕೆ ಬೆರಳಣಿಕೆಯ ಕೆಎಸ್ಆರ್‌‌ಟಿಸಿ ಬಸ್ ಸಂಚಾರ ನಡೆಸುತ್ತಿದೆ.


    ಉಳಿದಂತೆ ಎಲ್ಲಾ ಸರ್ವಿಸ್, ಸಿಟಿ, ಎಕ್ಸ್‌ಪ್ರೆಸ್‌ ಬಸ್ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದ್ದು, ಪೋಲಿಸರು ಅಲ್ಲಲ್ಲಿ ತಪಾಸಣೆ ನಡೆಸುತ್ತಿದ್ದು, ಅನಗತ್ಯ‌ ಸಂಚರಿಸುವವರ‌ ವಿಚಾರಣೆ ನಡೆಸುತ್ತಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply