Connect with us

    LATEST NEWS

    ಮೇ12 ರಂದು  ಸಂತೆ, ಜಾತ್ರೆ, ದನಗಳ ಜಾತ್ರೆ ನಿಷೇಧ

    ಮೇ12 ರಂದು  ಸಂತೆ, ಜಾತ್ರೆ, ದನಗಳ ಜಾತ್ರೆ ನಿಷೇಧ

    ಉಡುಪಿ, ಮೇ 10 : ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ -2018 ಕ್ಕೆ ಸಂಬಂಧಿಸಿದಂತೆ, ಚುನಾವಣೆಯನ್ನು ಶಾಂತಿಯುತವಾಗಿ ಹಾಗೂ ನಿಷ್ಪಕ್ಷಪಾತವಾಗಿ ನಡೆಸುವ ಸಲುವಾಗಿ ಮತದಾನ ದಿನದಂದು ಮತದಾರರಿಗೆ ಅನಾನುಕೂಲತೆಯಾಗುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ನಡೆಯುವ ಸಂತೆ, ಜಾತ್ರೆ,ದನಗಳ ಜಾತ್ರೆ ಇತ್ಯಾದಿಗಳನ್ನು ನಿಷೇಧಿಸಲಾಗಿದೆ.

    ಜಿಲ್ಲೆಯ ಪ್ರಸಕ್ತ ವಿದ್ಯಮಾನಗಳನ್ನು ಗಣನೆಗೆ ತೆಗೆದುಕೊಂಡು ಮೇ 12 ರ ಮತದಾನ ದಿನದಂದು , ಉಡುಪಿ ಜಿಲ್ಲೆಯಲ್ಲಿ ಜರುಗುವ ಸಂತೆ,ಜಾತ್ರೆ,ದನಗಳ ಜಾತ್ರೆ ಇತ್ಯಾದಿಗಳನ್ನು ನಿಷೇಧಿಸುವುದು ಸಾರ್ವಜನಿಕ ಹಿತದೃಷ್ಟಿಯಿಂದ ಅಗತ್ಯವೆಂದು ಮನಗಂಡು ದಂಡ ಪ್ರಕ್ರಿಯಾ ಸಂಹಿತೆ 1973 ರ ಕಲಂ 144(1) ರನ್ವಯ ಪ್ರದತ್ತವಾದ ಅಧಿಕಾರದಂತೆ ಮತದಾನ ದಿನವಾದ ಮೇ 12 ರಂದು ಉಡುಪಿ ಜಿಲ್ಲೆಯ ಕುಂದಾಪುರ ಎಪಿಎಂಸಿ ಯಾರ್ಡ ಸಂತೆ ( ವಾರದ ಸಂತೆ) ,ಚೇರ್ಕಾಡಿ(ಪೇತ್ರಿ) ಸಂತೆ ( ವಾರದ ಸಂತೆ) , ಕಾಪು ಯೇಣಗುಡ್ಡೆ(ಕಟಪಾಡಿ) ಸಂತೆ ( ವಾರದ ಸಂತೆ) ,ಕಾರ್ಕಳ ಪುರಸಭಾ ವ್ಯಾಪ್ತಿ ಸಂತೆ ( ವಾರದ ಸಂತೆ) ,ಕಾರ್ಕಳ ಅಜೆಕಾರು ಫಿರ್ಕಾದ ಮುದ್ರಾಡಿ ಗ್ರಾಮದ ಸಂತೆ ( ವಾರದ ಸಂತೆ) ಹಾಗೂ ಉಡುಪಿ ಜಿಲ್ಲೆಯ ಇತರೆ ಎಲ್ಲಾ ಸ್ಥಳಗಳಲ್ಲಿ ಜರುಗುವ ಸಂತೆ, ಜಾತ್ರೆ,ದನಗಳ ಜಾತ್ರೆ ಇತ್ಯಾದಿಗಳನ್ನು ನಿಷೇಧಿಸಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಆದೇಶ ಹೊರಡಿಸಿರುತ್ತಾರೆ.

    Share Information
    Advertisement
    Click to comment

    You must be logged in to post a comment Login

    Leave a Reply