Connect with us

DAKSHINA KANNADA

ಉಲ್ಲಂಘನೆ – 200 ಕ್ಕೂ ಅಧಿಕ ಪ್ರಕರಣ ದಾಖಲು 90 ವಾಹನಗಳೊಂದಿಗೆ ಸವಾರರು ವಶಕ್ಕೆ..!

Share Information

ಮಂಗಳೂರು, ಆಗಸ್ಟ್ 01: ನಗರದಲ್ಲಿ ಅಹಿತಕ ಘಟನೆಗಳು ಸಂಭವಿಸುತ್ತಿರುವ ಹಿನ್ನೆಲೆಯಲ್ಲಿ ಪೊಲೀಸರು ಭದ್ರತೆಯನ್ನಯ ಬಿಗಿಗೊಳಿಸಿದ್ದು, ಮುಂಜಾಗೃತಾ ಕ್ರಮವಾಗಿ ಸೆಕ್ಷನ್ 144 ಜಾರಿ ಮಾಡಲಾಗಿದೆ. ಜೊತೆಗೆ ಅಂಗಡಿ – ಮುಂಗಟ್ಟುಗಳನ್ನು ಸಂಜೆ ಆರು ಗಂಟೆಗೆ ಬಂದ್ ಮಾಡಲು ಜಿಲ್ಲಾಧಿಕಾರಿ ಮಂಗಳೂರು ನಗರ ಸೇರಿದಂತೆ ಜಿಲ್ಲೆಯಾದ್ಯಂತ ಆದೇಶ ಹೊರಡಿಸಿದ್ದಾರೆ.

ಈ ನಡುವೆ ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ರಾತ್ರಿ ಹೊತ್ತಯಲ್ಲಿ ಅನಾವಶ್ಯ ಸುತ್ತಾಡುವವರು – ಮೋಜು ಮಸ್ತಿಯಲ್ಲಿ ತೊಡಗುವವರ ವಿರುದ್ದ ಪೊಲೀಸ್ ಇಲಾಖೆ ಗಂಭೀರ ಹೆಜ್ಜೆಗಳನ್ನು ಇಟ್ಟಿದ್ದು, 19 ಆಯ್ದ ಸ್ಥಳಗಳಲ್ಲಿ ಚೇಕ್ ಫೊಸ್ಟ್ ನಿರ್ಮಾಣ ಮಾಡಿ ವಾಹನ ಸವಾರರ ಮೇಲೆ ಹದ್ದಿನ ಕಣ್ಣಿಟ್ಟಿದ್ದಾರೆ.

ಭಾನುವಾರ ರಾತ್ರಿ ನೈಟ್ ಕರ್ಫ್ಯೂ ಉಲ್ಲಂಘನೆ ಮಾಡಿದ್ದ 200 ಕ್ಕೂ ಅಧಿಕ ಪ್ರಕರಣಗಳನ್ನು ದಾಖಲು ಮಾಡಲಾಗಿದೆ. 90 ವಾಹನಗಳನ್ನು ಸವಾರರೊಂದಿಗೆ ಜಪ್ತಿ ಮಾಡಿ ವಶಕ್ಕೆ ಪಡೆಯಲಾಗಿದೆ.

ಯಾರು ಕೂಡ ಸೆಕ್ಷನ್ 144 ನ್ನು ಉಲ್ಲಂಘನೆ ಮಾಡಬೇಡಿ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತರಾದ ಎನ್ ಶಶಿ ಕುಮಾರ್ ನೇರವಾಗಿ ಎಚ್ಚರಿಕೆ ರವಾನೆ ಮಾಡಿದ್ದಾರೆ.


Share Information
Advertisement
Click to comment

You must be logged in to post a comment Login

Leave a Reply