Connect with us

    LATEST NEWS

    ಅನ್ಯಕೋಮಿನ ಯುವತಿ ಜೊತೆ ಸ್ನೇಹ, ಯುವಕನ ಬರ್ಬರ ಹತ್ಯೆ……….

    ಅನ್ಯಕೋಮಿನ ಯುವತಿ ಜೊತೆ ಸ್ನೇಹ, ಯುವಕನ ಬರ್ಬರ ಹತ್ಯೆ……….

    ದೆಹಲಿ, ಅಕ್ಟೋಬರ್ 10: ಅನ್ಯಕೋಮಿನ ಯುವತಿಯ ಜೊತೆ ಸ್ನೇಹ ಹೊಂದಿರುವ ಒಂದೇ ಕಾರಣಕ್ಕೆ ಹಿಂದೂ ಯುವಕನೋರ್ವನನ್ನು ಹೊಡೆದು ಕೊಂದ ಘಟನೆ ದೇಶದ ರಾಜಧಾನಿ ದೆಹಲಿಯಲ್ಲಿ ನಡೆದಿದೆ.

    ದೆಹಲಿಯ ಜಹಂಗೀಪುರದ ಯುವತಿಯ ಜೊತೆ ರಾಹುಲ್ ಎನ್ನುವ ಯುವಕ ಗೆಳೆತನ ಹೊಂದಿದ್ದ ಎನ್ನಲಾಗಿದೆ.

    ಈ ಕಾರಣಕ್ಕಾಗಿಯೇ ಯುವತಿಯ ಕಡೆಯ ಮಂದಿ ರಾಹುಲ್ ನನ್ನು ಹೊಡೆದು ಕೊಂದಿದ್ದು, ಗಂಭೀರವಾಗಿ ಗಾಯಗೊಂಡ ರಾಹುಲ್ (18) ದೆಹಲಿಯ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.

    ರಾಹುಲ್ ಕೊಲೆ ಹಿನ್ನಲೆಯಲ್ಲಿ ದೆಹಲಿ ಪೋಲೀಸರು ಮಹಮ್ಮದ್ ರಾಝ್ , ಮನ್ವಾರ್ ಹುಸೇನ್ ಹಾಗೂ ಮೂವರು ಬಾಲಾಪರಾಧಿಗಳನ್ನು ಬಂಧಿಸಿದ್ದಾರೆ.

    ಅನ್ಯಕೋಮಿನ ಯುವತಿಯೊಂದಿಗೆ ಸ್ನೇಹ ಹೊಂದಿದ್ದೇ ಈ ಯುವಕನ ಕೊಲೆಗೆ ಪ್ರಮುಖ ಕಾರಣವಾಗಿದೆ.

    ಘಟನೆಯ ಬಗ್ಗೆ ಪ್ರತಿಕ್ರಿಯಿಸಿರುವ ದೆಹಲಿ ಉತ್ತರ ವಲಯ ಡಿ.ಸಿ.ಪಿ. ವಿಜಯಾಂತ ಆರ್ಯ ಇದೊಂದು ಎರಡು ಕುಟುಂಬಗಳ ನಡುವಿನ ವೈಮನಸ್ಸಾಗಿದ್ದು, ಇದಕ್ಕೆ ಯಾವುದೇ ಬಣ್ಣ ನೀಡಬಾರದು ಎಂದು ಮನವಿ ಮಾಡಿದ್ದಾರೆ

    Share Information
    Advertisement
    Click to comment

    You must be logged in to post a comment Login

    Leave a Reply