LATEST NEWS
ಅನ್ಯಕೋಮಿನ ಯುವತಿ ಜೊತೆ ಸ್ನೇಹ, ಯುವಕನ ಬರ್ಬರ ಹತ್ಯೆ……….
ಅನ್ಯಕೋಮಿನ ಯುವತಿ ಜೊತೆ ಸ್ನೇಹ, ಯುವಕನ ಬರ್ಬರ ಹತ್ಯೆ……….
ದೆಹಲಿ, ಅಕ್ಟೋಬರ್ 10: ಅನ್ಯಕೋಮಿನ ಯುವತಿಯ ಜೊತೆ ಸ್ನೇಹ ಹೊಂದಿರುವ ಒಂದೇ ಕಾರಣಕ್ಕೆ ಹಿಂದೂ ಯುವಕನೋರ್ವನನ್ನು ಹೊಡೆದು ಕೊಂದ ಘಟನೆ ದೇಶದ ರಾಜಧಾನಿ ದೆಹಲಿಯಲ್ಲಿ ನಡೆದಿದೆ.
ದೆಹಲಿಯ ಜಹಂಗೀಪುರದ ಯುವತಿಯ ಜೊತೆ ರಾಹುಲ್ ಎನ್ನುವ ಯುವಕ ಗೆಳೆತನ ಹೊಂದಿದ್ದ ಎನ್ನಲಾಗಿದೆ.
ಈ ಕಾರಣಕ್ಕಾಗಿಯೇ ಯುವತಿಯ ಕಡೆಯ ಮಂದಿ ರಾಹುಲ್ ನನ್ನು ಹೊಡೆದು ಕೊಂದಿದ್ದು, ಗಂಭೀರವಾಗಿ ಗಾಯಗೊಂಡ ರಾಹುಲ್ (18) ದೆಹಲಿಯ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.
ರಾಹುಲ್ ಕೊಲೆ ಹಿನ್ನಲೆಯಲ್ಲಿ ದೆಹಲಿ ಪೋಲೀಸರು ಮಹಮ್ಮದ್ ರಾಝ್ , ಮನ್ವಾರ್ ಹುಸೇನ್ ಹಾಗೂ ಮೂವರು ಬಾಲಾಪರಾಧಿಗಳನ್ನು ಬಂಧಿಸಿದ್ದಾರೆ.
ಅನ್ಯಕೋಮಿನ ಯುವತಿಯೊಂದಿಗೆ ಸ್ನೇಹ ಹೊಂದಿದ್ದೇ ಈ ಯುವಕನ ಕೊಲೆಗೆ ಪ್ರಮುಖ ಕಾರಣವಾಗಿದೆ.
ಘಟನೆಯ ಬಗ್ಗೆ ಪ್ರತಿಕ್ರಿಯಿಸಿರುವ ದೆಹಲಿ ಉತ್ತರ ವಲಯ ಡಿ.ಸಿ.ಪಿ. ವಿಜಯಾಂತ ಆರ್ಯ ಇದೊಂದು ಎರಡು ಕುಟುಂಬಗಳ ನಡುವಿನ ವೈಮನಸ್ಸಾಗಿದ್ದು, ಇದಕ್ಕೆ ಯಾವುದೇ ಬಣ್ಣ ನೀಡಬಾರದು ಎಂದು ಮನವಿ ಮಾಡಿದ್ದಾರೆ
Facebook Comments
You may like
-
ಸಿನಿಮೀಯ ರೀತಿ ತಾಳಿ ಕಟ್ಟಿ ನಿಂತಲ್ಲೇ ಹಾರ ಬದಲಾಯಿಸಿದ ಭೂಪ!
-
ಕಟ್ಟಿಗೆಯಲ್ಲಿ ಹಲ್ಲೆ ಮಾಡಿ ತಂದೆಯನ್ನೇ ಕೊಲೆ ಮಾಡಿದ ಮಗ
-
ಮೊಬೈಲ್ ಇಯರ್ ಪೋನ್ ವೈರ್ ನಿಂದ ತನ್ನ ನವಜಾತ ಶಿಶುವನ್ನು ಕೊಲೆಗೈದ ಪಾಪಿ ತಾಯಿ
-
ಕುಡಿದ ಮತ್ತಿನಲ್ಲಿ ಪತ್ನಿಯನ್ನು ಕಟ್ಟಿಗೆಯಲ್ಲಿ ಹೊಡೆದು ಕೊಲೆ ಮಾಡಿದ ಗಂಡ
-
ಮಗಳ ಮೇಲೆ ಕೆಟ್ಟ ದೃಷ್ಟಿ ಇಟ್ಟ ಪತಿಯನ್ನು ಕೊಂದ ಪತ್ನಿ!
-
ಬೆಂಗಳೂರು- ದೆಹಲಿ ರಾಜಧಾನಿ ಎಕ್ಸ್ ಪ್ರೆಸ್ ರೈಲಿನಲ್ಲಿ ಅಗ್ನಿ ಅವಘಡ
You must be logged in to post a comment Login