LATEST NEWS
ಹೆಬ್ಬಾರಬೈಲು ಗೋಡೆ ದುರಂತ ಮೃತರ ಕುಟುಂಬಕ್ಕೆ 10 ಲಕ್ಷ ಪರಿಹಾರ ವಿತರಣೆ
ಹೆಬ್ಬಾರಬೈಲು ಗೋಡೆ ದುರಂತ ಮೃತರ ಕುಟುಂಬಕ್ಕೆ 10 ಲಕ್ಷ ಪರಿಹಾರ ವಿತರಣೆ
ಪುತ್ತೂರು ಜುಲೈ 9: ಆವರಣ ಗೋಡೆ ಕುಸಿದು ಪ್ರಾಣ ಹಾನಿ ಸಂಭವಿಸಿದ ಹೆಬ್ಬಾರ ಬೈಲಿನ ಮನೆಗೆ ಉಸ್ತುವಾರಿ ಸಚಿವ ಯು.ಟಿ ಖಾದರ್ ಭೇಟಿ ನೀಡಿ ಮೃತರ ಕುಟುಂಬಕ್ಕೆ 10 ಲಕ್ಷ ರೂಪಾಯಿ ಪರಿಹಾರ ವಿತರಿಸಿದರು.
ಪುತ್ತೂರಿನಲ್ಲಿ ತಡೆಗೋಡೆ ಕುಸಿದು ಅಜ್ಜಿ, ಮೊಮ್ಮಗ ಮೃತಪಟ್ಟ ಹೆಬ್ಟಾರಬೈಲು ಮನೆಗೆ ಸಚಿವ ಯು.ಟಿ। ಖಾದರ್ ಅವರು ಭೇಟಿ ನೀಡಿ ಸರ್ಕಾರದ ಪರಿಹಾದ ಚೆಕ್ಕನ್ನು ಹಸ್ತಾಂತರಿಸಿದರು. ಪ್ರಕೃತಿ ವಿಕೋಪ ನಿಧಿಯಿಂದ ತಲಾ 5 ಲಕ್ಷದಂತೆ 10 ಲಕ್ಷ ಹಾಗೂ ಮನೆ ದುರಸ್ಥಿಗೆ 1 ಲಕ್ಷ ಸೇರಿ ಒಟ್ಟು 11 ಲಕ್ಷ ಪರಿಹಾರವನ್ನು ವಿತರಿಸಿ ಸಾಂತ್ವಾನ ಹೇಳಿದರು. ಶಾಸಕ ಸಂಜೀವ ಮಠಂದೂರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
You must be logged in to post a comment Login