ಉಳ್ಳಾಲ : ಉಳಿಯ ಜನರ ಬದುಕನ್ನೇ ಕಸಿದ ಅಕ್ರಮ ಮರಳುಗಾರಿಕೆ ಪ್ರಕರಣಕ್ಕೆ ರಾಷ್ಟ್ರೀಯ ಹಸಿರು ಪ್ರಾಧಿಕಾರ (NGT) ಎಂಟ್ರಿ..!
ಉಳ್ಳಾಲ : ಮಂಗಳೂರು ಸಮೀಪ ಉಳ್ಳಾಲ ದ ದ್ವೀಪ ಪ್ರದೇಶ ಉಳಿಯ ದ ಜನರ ದೈನಂದಿನ ಬದುಕನ್ನೇ ಕಸಿದ ಈ ಅಕ್ರಮ ಮರಳುಗಾರಿಕೆ ಪ್ರಕರಣಕ್ಕೆ ಇದೀ್ಗ ರಾಷ್ಟ್ರೀಯ ಹಸಿರು ಪ್ರಾಧಿಕಾರ(NGT) ಮಧ್ಯ ಪ್ರವೇಶಿಸಿದೆ. ಮೊದಲ ಹಂತದಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿ ವಿರುದ್ಧ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದೆ. ಈಗಾಗಲೇ ಒಂದು ಹಂತದ ವಿಚಾರಣೆ ನಡೆದು ಮುಂದಿನ ವಿಚಾರಣೆ ಜನವರಿ ತಿಂಗಳಿಗೆ ಮುಂದೂಡಲಾಗಿದೆ.
ಮಂಗಳೂರು : ಮರಳು ನಗರಿ ಮಂಗಳೂರಿನಲ್ಲಿ ಅಕ್ರಮ ಮರಳುಗಾರಿಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ರಾಜಕೀಯ ಪ್ರಭಾವ ಬಳಸಿ ಈ ಅಕ್ರಮ ನಡೆಯುತ್ತಿರುವುದರಿಂದ ಗಣಿ ಇಲಾಖೆ, ಪೊಲೀಸ್ ಇಲಾಖೆ ದೂರುಗಳು ಬಂದರೂ ನಾಟಕೀಯ ದಾಳಿ ನಡೆಸಿ ಬಳಿಕ ಸುಮ್ಮನಾಗುತ್ತಿದ್ದಾರೆ.
ಮಂಗಳೂರು ಸಮೀಪ ಉಳ್ಳಾಲದ ದ್ವೀಪ ಪ್ರದೇಶ ಉಳಿಯದ ಜನರ ದೈನಂದಿನ ಬದುಕನ್ನೇ ಕಸಿದ ಈ ಅಕ್ರಮ ಮರಳುಗಾರಿಕೆ ಪ್ರಕರಣಕ್ಕೆ ಇದೀ್ಗ ರಾಷ್ಟ್ರೀಯ ಹಸಿರು ಪ್ರಾಧಿಕಾರ(NGT) ಮಧ್ಯ ಪ್ರವೇಶಿಸಿದೆ. ಮೊದಲ ಹಂತದಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿ ವಿರುದ್ಧ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದೆ. ಈಗಾಗಲೇ ಒಂದು ಹಂತದ ವಿಚಾರಣೆ ನಡೆದು ಮುಂದಿನ ವಿಚಾರಣೆ ಜನವರಿ ತಿಂಗಳಿಗೆ ಮುಂದೂಡಲಾಗಿದೆ.
ಮರಳು ದಂಧೆಕೋರರ ಅಟ್ಟಹಾಸದ ಪರಿಣಾಮ ದ್ವೀಪ ಪ್ರದೇಶ ವಿನಾಶದ ಅಂಚಿಗೆ ತಲುಪಿದೆ. ಸುಮಾರು 80 ಎಕರೆ ಇದ್ದ ದ್ವೀಪ ಪ್ರದೇಶ ಇದೀಗ 40 ಎಕರೆಗೆ ಬಂದಿದೆ. ಈ ದ್ವೀಪ ಪ್ರದೇಶದಲ್ಲಿ ಸುಮಾರು ಐವತ್ತೈದ್ದಕೂ ಹೆಚ್ಚು ಕುಟುಂಬಗಳು ನೂರಾರು ವರ್ಷಗಳಿಂದ ವಾಸವಾಗಿದ್ದು, ಅಕ್ರಮ ಮರಳುಗಾರಿಕೆಯಿಂದ ಇವರುಗಳ ಮನೆ ಅಪಾಯದಲ್ಲಿದೆ. ವಿಧಾನಸಭೆಯ ಸ್ಪೀಕರ್ ಯುಟಿ ಖಾದರ್ ಪ್ರತಿನಿಧಿಸುವ ಕ್ಷೇತ್ರದ ವ್ಯಾಪ್ತಿಯಲ್ಲಿ ಈ ದ್ವೀಪವಿದ್ದು ಸ್ವತಃ ಸ್ಪೀಕರ್ ಅವರೇ ಈ ಅಕ್ರಮ ಮರಳುಗಾರಿಕೆಯ ಬಗ್ಗೆ ತನಿಖೆ ನಡೆಸಿ ವರದಿ ನೀಡಲು ಸಮತಿಯೊಂದನ್ನು ರಚಿಸಿದ್ದಾರೆ. ಕಂದಾಯ, ಗಣಿ, ಪೊಲೀಸ್ ಇಲಾಖೆ ಅಧಿಕಾರಿಗಳನ್ನು ಒಳಗೊಂಡ ಸಮಿತಿ ರಚಿಸಿ ಈ ಹಿಂದೆ ಎಷ್ಟು ಜಾಗವಿತ್ತು? ಈಗ ಎಷ್ಟಿದೆ ಎಂಬ ಬಗ್ಗೆ ವರದಿ ನೀಡುವಂತೆ ಸೂಚಿಸಲಾಗಿದೆ. ಈ ಅಕ್ರಮ ಮರಳುಗಾರಿಕೆ ವಿರುದ್ದಸ್ಥಳೀಯರು ಆಡಳಿತ ವ್ಯವಸ್ಥೆಗೆ ದೂರು ನೀಡಿದರೂ ಯಾವುದೇ ಪ್ರಯೋಜನ ಆಗಿರಲಿಲ್ಲ. ಇನ್ನ ಈ ಅಕ್ರಮ ಮರಳು ಮಾಫಿಯಾ ವಿರುದ್ದ ಧ್ವನಿ ಎತ್ತಿದ್ರೆ ಅವರ ಮೇಲೆ ವ್ಯವಸ್ಥಿತ ದಾಳಿಗಳು ನಡೆಯುತ್ತಿದ್ದು ಇಲ್ಲಿನ ಜನ ಜೀವ ಭಯದಿಂದಲೇ ದಿನ ದೂಡಬೇಕಿದೆ. ಇದೀಗ ರಾಷ್ಟ್ರೀಯ ಹಸಿರು ಪ್ರಾಧಿಕಾರವು ಎಂಟ್ರಿ ಇಲ್ಲಿ ಯಾವ ಪರಿಣಾಮ ಬೀರುತ್ತೇ ಕಾದು ನೋಡಬೇಕಿದೆ.