LATEST NEWS
ಉಳ್ಳಾಲ ಅಳಿವೆಬಾಗಿಲಿನಲ್ಲಿ ಸಿಲುಕಿ ಹಾಕಿಕೊಂಡಿದ್ದ ಮೀನುಗಾರಿಕಾ ದೋಣಿ ರಕ್ಷಣೆ
ಮಂಗಳೂರು ಜುಲೈ 13: ಉಳ್ಳಾಲ ಅಳಿವೆಬಾಗಿಲು ಸಮುದ್ರದಲ್ಲಿ ತಾಂತ್ರಿಕ ತೊಂದರೆಯಿಂದ ಸಿಲುಕಿದ್ದ ಮೀನುಗಾರಿಕಾ ದೋಣಿಯನ್ನು ಇಂದು ರಕ್ಷಣೆ ಮಾಡಲಾಗಿದೆ.
ಕಳೆದ ಎರಡು ದಿನಗಳ ಹಿಂದಷ್ಟೇ ಆಳಸಮುದ್ರ ಮೀನುಗಾರಿಕೆಗೆ ತೆರಳಿದ್ದ ದೋಣಿ ತಾಂತ್ರಿಕ ಸಮಸ್ಯೆಯಿಂದಾಗಿ ಪೆಟ್ರೋಲ್ ಖಾಲಿಯಾಗಿ ಅಳಿವೆ ಬಾಗಿಲಿನಲ್ಲಿ ಸಿಲುಕಿ ಹಾಕಿಕೊಂಡಿತ್ತು. ಈ ಕುರಿತಂತೆ ಕೂಡಲೇ ಕರಾವಳಿ ರಕ್ಷಣಾ ಪಡೆಗೆ ಮಾಹಿತಿ ಪಡೆಗೆ ನೀಡಲಾಗಿತ್ತು.
ಸೋಮವಾರ ಮುಂಜಾನೆ ಮಂಜೇಶ್ವರದಿಂದ ಮತ್ತೊಂದು ಬೋಟ್ ನಲ್ಲಿ ಮೀನುಗಾರರು ತೆರಳಿ ಬೋಟ್ ನ್ನು ದಡಕ್ಕೆ ತಂದಿದ್ದಾರೆ. ಕರಾವಳಿ ರಕ್ಷಣಾ ಪಡೆ, ಉಳ್ಳಾಲ ಪೊಲೀಸರು ಸಹಕಾರ ನೀಡಿದರು.
You must be logged in to post a comment Login