Connect with us

    LATEST NEWS

    ಮೇ 18 ರಿಂದ ಉಡುಪಿಯಲ್ಲಿ ಸೆಲೂನ್ ಓಪನ್

    ಮೇ 18 ರಿಂದ ಉಡುಪಿಯಲ್ಲಿ ಸೆಲೂನ್ ಓಪನ್

    ಉಡುಪಿ, ಮೇ 14: ಗ್ರೀನ್ ಝೋನ್ ನಲ್ಲಿರುವ ಉಡುಪಿ ಜಿಲ್ಲೆಯ ಜನರಿಗೆ ಒಂದು ಗುಡ್ ನ್ಯೂಸ್ ಮೇ 18 ರಿಂದ ಜಿಲ್ಲೆಯ ಎಲ್ಲಾ ಸೆಲೂನ್ ಗಳು ಕಾರ್ಯಾರಂಭಿಸಲಿದೆ ಎಂದು ಉಡುಪಿ ಜಿಲ್ಲಾ ಸವಿತಾ ಸಮಾಜ ಅಧ್ಯಕ್ಷ ಭಾಸ್ಕರ್ ಭಂಡಾರಿ ತಿಳಿಸಿದ್ದಾರೆ.

    ಇಂದು ಉಡುಪಿಯಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ಸವಿತಾ ಸಮಾಜದ ನಿಯೋಗವು ಮೇ 13 ರಂದು ಜಿಲ್ಲಾಧಿಕಾರಿಗಳನ್ನು ಭೇಟಿಯಾಗಿ ಪ್ರಸ್ತುತ ಪರಿಸ್ಥಿತಿಗಳ ಬಗ್ಗೆ ಚರ್ಚಿಸಿದ್ದು, ಮೇ 18 ರಂದು ಕ್ಷೌರದಂಗಡಿಗಳನ್ನು ತೆರೆಯಲು ಜಿಲ್ಲಾಧಿಕಾರಿಗಳು ಷರತ್ತುಬದ್ಧ ಅನುಮತಿ ನೀಡಲು ಒಪ್ಪಿದ್ದಾರೆ” ಎಂದು ಭಂಡಾರಿ ಅವರು ತಿಳಿಸಿದ್ದಾರೆ.

    ಅಲ್ಲದೆ ಲಾಕ್ ಡೌನ್ ಸಂದರ್ಭ ಸವಿತಾ ಸಮಾಜದ ಬಂಧುಗಳಿಗೆ ಆಹಾರ ಕಿಟ್ ಗಳನ್ನು ನೀಡಿದ್ದಕ್ಕೆ ಎಲ್ಲರಿಗೂ ಧನ್ಯವಾದ ತಿಳಿಸಿದ ಅವರು ಕ್ಷೌರಿಕ ಸಮುದಾಯದ ಎಲ್ಲ ಸದಸ್ಯರಿಗೆ 5,000 ರೂ.ಗಳ ಹಣಕಾಸು ಪ್ಯಾಕೇಜ್ ಘೋಷಿಸಿದ್ದಕ್ಕಾಗಿ ರಾಜ್ಯ ಸರ್ಕಾರಕ್ಕೆ ಧನ್ಯವಾದ ಅರ್ಪಿಸಿದರು.

    ಕೆಲವು ಷರತ್ತು ಬದ್ದ ನಿಯಮಗಳೊಂದಿಗೆ ಸೆಲ್ಯೂನ್ ತೆರೆಯಲು ಅವಕಾಶ ನೀಡಲಾಗಿದೆ. ಕ್ಷೌರದಂಗಡಿಗೆ ಬರುವ ಗ್ರಾಹಕರು ಮುಂಚಿತವಾಗಿಯೇ ನೇಮಕಾತಿ ಮಾಡುವುದು ಉತ್ತಮ. ಯಾವುದೇ ಕಾರಣಕ್ಕೂ ಹವಾನಿಯಂತ್ರಣಗಳನ್ನು ಬಳಸಲಾಗುವುದಿಲ್ಲ. ಗ್ರಾಹಕರು ಮತ್ತು ಕ್ಷೌರಿಕರ ನಡುವೆ ಕನಿಷ್ಠ ಎರಡು ಅಡಿಗಳ ಅಂತರವನ್ನು ಕಾಯ್ದುಕೊಳ್ಳಬೇಕು. ಕ್ಷೌರದಂಗಡಿಯಲ್ಲಿ ಬಟ್ಟೆಗಳು ಸ್ವಷ್ಚವಾಗಿರಬೇಕು. ಕ್ಷೌರಿಕರು ಗ್ರಾಹಕರಿಗೆ ಸೇವೆ ಸಲ್ಲಿಸುವಾಗ ಮಾಸ್ಕ್‌ ಮತ್ತು ಕೈ ಕೈಗವಸುಗಳನ್ನು ಧರಿಸಬೇಕು. ಗ್ರಾಹಕರಿಗೆ ಸೇವೆ ಸಲ್ಲಿಸಿದ ನಂತರ, ಅವರು ಸೋಪಿನಿಂದ ಕೈ ತೊಳೆಯಬೇಕು. ಗ್ರಾಹಕರು ಭೇಟಿ ನೀಡಿದಾಗ ಸಾನಿಟೈಸರ್‌ನಿಂದ ಕೈ ಸ್ವಚ್ಛಗೊಳಿಸತಕ್ಕದು. ಒಂದೇ ಸಲೂನ್‌ನಲ್ಲಿ ಇಬ್ಬರು ಕ್ಷೌರಿಕರು ಕೆಲಸ ಮಾಡುತ್ತಿದ್ದಲ್ಲಿ ಎರಡು ಕುರ್ಚಿಗಳ ನಡುವೆ ಕನಿಷ್ಠ ಒಂದು ಮೀಟರ್ ಅಂತರ ಕಾಯ್ದುಕೊಳ್ಳಬೇಕು. ಒಬ್ಬ ಗ್ರಾಹಕನಿಗೆ ಬಳಸುವ ಬಟ್ಟೆಗಳನ್ನು ಇನ್ನೊಬ್ಬರಿಗೆ ಬಳಸಬಾರದು. ಅದನ್ನು ತೊಳೆದು ಸ್ವಚ್ಚಗೊಳಿಸಿದ ನಂತರವೇ ಮತ್ತೆ ಬಳಸಬಹುದು. ಪ್ರತಿಯೊಬ್ಬ ಕ್ಷೌರಿಕರು ತಮ್ಮ ಮೊಬೈಲ್ ಫೋನ್‌ಗಳಲ್ಲಿ ಆರೋಗ್ಯ ಸೇತು ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಬೇಕು.

    Share Information
    Advertisement
    Click to comment

    You must be logged in to post a comment Login

    Leave a Reply