Connect with us

    LATEST NEWS

    ಉಡುಪಿ ಕೃಷ್ಣ ಮಠದಲ್ಲಿ ಸೆಕ್ಸ್ ಹಿಂದೆಯೂ ಇತ್ತು – ವೈರಲ್ ಆದ ಶಿರೂರು ಶ್ರೀಗಳ ಮತ್ತೊಂದು ಆಡಿಯೋ

    ಉಡುಪಿ ಕೃಷ್ಣ ಮಠದಲ್ಲಿ ಸೆಕ್ಸ್ ಹಿಂದೆಯೂ ಇತ್ತು – ವೈರಲ್ ಆದ ಶಿರೂರು ಶ್ರೀಗಳ ಮತ್ತೊಂದು ಆಡಿಯೋ

    ಉಡುಪಿ ಜುಲೈ 21: ಕಳೆದ ಗುರುವಾರ ಅನುಮಾನಾಸ್ಪದವಾಗಿ ಮೃತಪಟ್ಟ ಉಡುಪಿ ಶಿರೂರು ಶ್ರೀಗಳ ಸಾವಿನ ನಂತರ ಉಡುಪಿಯ ಅಷ್ಟಮಠಗಳ ಇತಿಹಾಸದ ಒಂದೊಂದೇ ಆಡಿಯೋಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಒಂದೊಂದಾಗಿ ಬರಲಾರಂಭಿಸಿದೆ.
    ಉಡುಪಿ ಅಷ್ಟಮಠಗಳಲ್ಲಿ ಒಂದಾಗಿರುವ ಶಿರೂರು ಮಠದ ಲಕ್ಷ್ಮೀವರ ತೀರ್ಥ ಸ್ವಾಮಿಗಳು ಸಾವಿಗು ನಾಲ್ಕು ದಿನಗಳ ಮುನ್ನ ಮಾತನಾಡಿದ್ದರು ಎನ್ನಲಾದ ಆಡಿಯೋ ಈಗ ವೈರಲ್ ಆಗಿದೆ.

    ಅಷ್ಟಮಠಗಳ ಇತರ ಯತಿಗಳು ತಮ್ಮ ವಿರುದ್ಧ ಸಂಚು ಹೂಡಿದ್ದರು ಮತ್ತು ಇದಕ್ಕಾಗಿ ಖಾಸಗಿ ಸುದ್ದಿವಾಹಿನಿಗಳಿಗೆ ಹಣಕೊಟ್ಟು ನನ್ನ ವಿರುದ್ಧ ಪಿತೂರಿ ನಡೆಸಿದ್ದರು ಎಂದು ಆಡಿಯೋದಲ್ಲಿ ಶಿರೂರು ಶ್ರೀ ಆರೋಪಿಸಿದ್ದಾರೆ. ಅಲ್ಲದೆ ಈ ಹಿಂದೆಯೂ ಮಠದ ಕೆಲವು ಸ್ವಾಮಿಜಿಗಳನ್ನು ಜೀವಂತ ಶವ ಮಾಡಲಾಗಿತ್ತು. ಈಗ ನನ್ನನ್ನು ಮುಗಿಸಲು ಹೊರಟಿದ್ದಾರೆ ಎಂದು ದೂರಿದ್ದಾರೆ.

    ಅಷ್ಟಮಠಗಳ ಹಳೇ ಇತಿಹಾಸ ಕೆದಕಿದ ಆಡಿಯೋ ಲಭ್ಯವಾಗಿದ್ದು ಅದರಲ್ಲಿ ಅಷ್ಟಮಠಾಧೀಶರ ಅಕ್ರಮ ಸಂಬಂಧ ಬಗ್ಗೆ ಮಾತನಾಡಿದ್ದ ಶೀರೂರು ಶ್ರೀಗಳು

    ಆಡಿಯೋ ಸಾರಾಂಶ

    ದ್ವಂದ್ವ ಮಠಗಳು ಎನ್ನುವುದಕ್ಕೆ ಆಧಾರವಿಲ್ಲ
    ಇಲ್ಲಿ ನಾಲ್ಕು ಮಠಗಳಿಗೆ ಒಂದು ಏಕಾದಶಿ
    ಉಳಿದ ನಾಲ್ಕು ಮಠಗಳಿಗೆ ಬೇರೆ ಏಕಾದಶಿ
    ಜನರು ಉಡುಪಿಯನ್ನು ನೋಡಿ ಏಕಾದಶಿ ಆಚರಿಸುತ್ತಾರೆ
    ಪುತ್ತಿಗೆ ಸ್ವಾಮಿಗಳು ಒಳ್ಳೆಯ ಸಾಧನೆ ಮಾಡಿದ್ದಾರೆ
    ಅವರು ವಿದೇಶಕ್ಕೆ ಹೋಗಿ ಚರ್ಚುಗಳಲ್ಲಿ ಕೃಷ್ಣನನ್ನು ಸ್ಥಾಪಿಸಿದ್ದಾರೆ
    ಅದಕ್ಕೆ ಅವರ ವಿರುದ್ದ ಎಲ್ಲರೂ ಒಟ್ಟಾಗಿದ್ದಾರೆ
    ಕೃಷ್ಣಾಪುರ ಮಠದ ಹಿರಿಯ ಯತಿಗಳು ಆರು ಮಕ್ಕಳ ಅಪ್ಪ
    ನಾನು ಏನೋ ಒಂದು ತಪ್ಪು ಮಾಡಿದ್ದೇನೆ
    ಇವರು ಮಾಡಿದ ತಪ್ಪಿನ ಎದುರು ನಾನು ಮಾಡಿರುವುದು ಏನೂ ಅಲ್ಲ
    ಸೆಕ್ಸ್ ಅಷ್ಟಮಠದಲ್ಲಿ ಹಿಂದಿನಿಂದಲೂ ಇತ್ತು
    ಪುತ್ತಿಗೆ ಮಠದ ಶತಾಯುಷಿ ಸುದೀಂದ್ರ ತೀರ್ಥರ ಗುರುಗಳಿಗೆ ಅಕ್ರಮ ಸಂಬಂಧವಿತ್ತು
    ಅಕ್ಕಯ್ಯ ಎಂಬ ಹೆಂಗಸಿನೊಂದಿಗೆ ಸಂಬಂಧವಿತ್ತು ತನ್ನ ಮಗನಿಗೇ ಅವರು ದೀಕ್ಷೆ ಕೊಟ್ಟಿದ್ದರು
    ಉಳಿದ ಏಳು ಮಠದ ಸ್ವಾಮಿಗಳು ಅದನ್ನು ಪ್ರಶ್ನಿಸಿ ಮದ್ರಾಸ್ ಕೋರ್ಟ್‍ಗೆ ಹೋಗಿದ್ದರು
    ಆದರೆ ಸುಧೀಂದ್ರ ತೀರ್ಥರಿಗೆ ಕೋರ್ಟಿನಲ್ಲಿ ಜಯವಾಯಿತು
    ಅವರ ಮಗ ಪರ್ಯಾಯವನ್ನೂ ಪೂರೈಸಿದರು.
    ಅಕ್ಕಯ್ಯನ ಮಗನ ವೃಂದಾವನ ಇಂದಿಗೂ ಉಡುಪಿಯಲ್ಲಿದೆ ಅದನ್ನು ಸಣ್ಣ ವೃಂದಾವನ ಅಂತ ಹೇಳುತ್ತಾರೆ.
    ಅವರೆಷ್ಟು ಜನರು ಸರಿ ಇದ್ದಾರೆ.? ಪ್ರಾಣದೇವರ ಮುಂದೆ ಬಂದು ಹೇಳಲಿ
    ಅಜ್ಜನಿಗೂ ಮೂವರು ಮಕ್ಕಳಿದ್ದಾರೆ
    ಅವರಿಗೆ ತಮಿಳುನಾಡಿನಲ್ಲಿ ಲವ್ ಇದೆ
    ಆ ಮಹಿಳೆ ಮೂವರು ಮಕ್ಕಳನ್ನು ಹೆತ್ತು ತೀರಿದ್ದಾರೆ
    ಓರ್ವ ಮಗಳು ಡಾ. ಉಷಾ ಅನ್ನುವವರು ಚೆನೈನಲ್ಲಿ ಇದ್ದಾರೆ
    ಅವರಿಗೆಲ್ಲಾ ಮಠಕ್ಕೆ ಪ್ರವೇಶವಿಲ್ಲ
    ಅವರು ನನಗೆ ಕರೆ ಮಾಡಿ ಎಲ್ಲ ವಿಷಯ ತಿಳಿಸಿದ್ದರು
    ನಿಮಗೆ ಅವರು ಡ್ಯಾಮೇಜ್ ಮಾಡಿದರೆ ನಾವು ನಿಮ್ಮ ಜೊತೆ ನಿಲ್ಲುತ್ತೇವೆ ಎಂದಿದ್ದರು
    ಉಷಾ ಅವರು ಡಿ.ಎನ್.ಎ ಪರೀಕ್ಷೆಗೆ ಸಿದ್ಧ ಎಂದಿದ್ದಾರೆ
    ಸ್ವಾಮಿಜಿಗಳು ಶಾಸ್ತ್ರ ಪ್ರಕಾರ ಕುದುರೆ ಹತ್ತುವಂತಿಲ್ಲ
    ಆದರೆ ಕಿರಿಯ ಸ್ವಾಮಿಗಳು ಕುದುರೆ ಸವಾರಿ ಮಾಡುತ್ತಾರೆ
    ಇಲ್ಲಿ ಒಂದು ಕಣ್ಣಿಗೆ ಬೆಣ್ಣೆ ಇನ್ನೊಂದು ಕಣ್ಣಿಗೆ ಸುಣ್ಣವಾಗುತ್ತಿದೆ
    ನಾನು ಅವರನ್ನು ನಂಬಿ ನನ್ನ ಪಟ್ಟದ ದೇವರನ್ನು ಕೊಟ್ಟಿದ್ದೆ
    ವಿಶ್ವಾಸಘಾತ ಮಾಡಿದರು ನನಗೆ ನಾನು ಸನ್ಯಾಸ ಬಿಡಬೇಕು ಎನ್ನಲು ಇವರು ಯಾರು..?
    ನಿರಂತರ 47 ವರ್ಷ ಕೃಷ್ಣನ ಪೂಜೆ ಮಾಡಿದ್ದು ನಾನು ಮಾತ್ರ
    ವಿಶ್ವೇಶತೀರ್ಥರೂ ಮಾಡಿಲ್ಲ. ಎಲ್ಲಾ ಪರ್ಯಾಯದದಲ್ಲೂ ನಾನೇ ಪೂಜೆ ಮಾಡಿದ್ದು
    ಆಗ ತಪ್ಪು ಸಿಗಲಿಲ್ಲ ಈಗ ನನ್ನನ್ನು ದೂರ ಮಾಡಿದ್ದಾರೆ. ಚುನಾವಣೆ ನಿಲ್ಲುತ್ತೇನೆ ಎಂದ ಮಾತ್ರಕ್ಕೆ ನಾನು ಬೇಡವಾಗಿ ಹೋದೆ.
    ಪೇಜಾವರ ಸ್ವಾಮಿಗಳಿಗೆ ಪ್ರತಿಯೊಂದಕ್ಕೂ ನಾನೇ ಬೇಕಾಗಿತ್ತು
    ಅನಾಥೋ ದೇವರಕ್ಷಕ ..ನಾವೆಲ್ಲಾ ಅನಾಥರು ಗೊತ್ತಾಯ್ತಲ್ಲಾ..
    ಎಲ್ಲರೂ ಪ್ರೀತಿಯಿಂದ ಇರಬೇಕಿತ್ತು ಇವರು ಇಷ್ಟು ದ್ವೇಷ ಸಾಧನೆ ಮಾಡುವಾಗ ನಾನು ಏನು ಮಾಡಬೇಕು..?
    ಅಷ್ಟಮಠಗಳು ಇಷ್ಟಮಠಗಳಾಗಿ ಅಣ್ಣತಮ್ಮಂದಿರಂತೆ ಇರಬೇಕಿತ್ತು ಆ ಮನೋಭಾವನೆಯೇ ಇಲ್ಲ
    ಕೃಷ್ಣ ಮಠದ ಇತಿಹಾಸ ಕೇಳ್ತೇನೆ ಹೇಳಿ
    ಅದಮಾರು ಮಠದ ಗುರುಗಳಾಗಿದ್ದ ವಿಭುದೇಶ ತೀರ್ಥರಿಗೆ ಕೊಂಕಣಿ ಮಹಿಳೆಯೊಬ್ಬರ ಸಂಪರ್ಕವಿತ್ತು ಅದರಲ್ಲಿ ಎರಡು ಮಕ್ಕಳಿದ್ದರು.
    ಅವರ ಗುರುಗಳಾಗಿದ್ದ ವಿಭುದಪ್ರಿಯರಿಗೆ ರಾಜವಾಡೆ ಎಂಬ ಮಹಿಳೆಯ ಸಂಪರ್ಕವಿತ್ತು
    ಅವರ ಹಿಂದಿನವರಾದ ವಿಭುದ ಮಾನ್ಯರನ್ನು ಮರ್ಡರ್ ಮಾಡಲಾಗಿದೆ. ಹೆಣ್ಣಿನ ವಿಚಾರದಲ್ಲಿ ಅವರ ಕೊಲೆ ನಡೆದಿದೆ
    ಪಲಿಮಾರು ಮಠದ ರಘುವಲ್ಲಭರು ನನ್ನ ಅಣ್ಣನ ಪತ್ನಿಯ ಸಹೋದರ. ಅವರನ್ನು 1970ಯಲ್ಲಿ ಐದು ಲಕ್ಷ ಕೊಟ್ಟು ಪೀಠದಿಂದ ಎಬ್ಬಿಸಲಾಯಿತು.
    ಬಳಿಕ ಅಜ್ಜ ತನ್ನ ಗುರುಗಳಾದ ಬಂಡಾರಕೇರಿ ಮಠದ ವಿದ್ಯಾಮಾನ್ಯರನ್ನು ಪಲಿಮಾರು ಪೀಠಕ್ಕೆ ತಂದು ಕೂರಿಸಿದರು. ಇದು ನನ್ನ ಗುರು ದಕ್ಷಿಣೆ ಎಂದು ಬೀಗಿದರು.
    ಇದು ಅಜ್ಜ ಮಾಡಿದ ಮೊದಲ ಜೀವಂತ ಮರ್ಡರ್.
    ರಘುವಲ್ಲಭರು ಬಳಿಕ ವಿದೇಶಕ್ಕೆ ಹೋಗಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದರು.

    ಇದು ವೈರಲ್ ಆದ ಆಡಿಯೋದ ಸಾರಾಂಶ

    VIDEO

    Share Information
    Advertisement
    Click to comment

    You must be logged in to post a comment Login

    Leave a Reply