Connect with us

    UDUPI

    ಅಕ್ರಮ ಸಾಗುವಾನಿ ಮರ ವಶ : ಮೂವರ ಬಂಧನ

    ಉಡುಪಿ, ಆಗಸ್ಟ್ 05: ಉಡುಪಿಯ ಇನ್ನಂಜೆ ರೈಲ್ವೆ ನಿಲ್ದಾಣದ ಬಳಿ , ಸಾಗುವಾನಿ ಮರವನ್ನು ಅಕ್ರಮವಾಗಿ ಕತ್ತರಿಸಿ, ಮಾರಾಟ ಮಾಡಲು ಯತ್ನಿಸುತ್ತಿದ್ದ, ಮೂವರನ್ನು ರೈಲ್ವೇ ರಕ್ಷಣಾ ದಳದ ಪೋಲಿಸರು ಬಂಧಿಸಿದ್ದಾರೆ. ಆರೋಪಿಗಳಾದ ಗುಣಕರ ಮಂಡೇಡಿ, ಇನ್ನಂಜೆ ಹಾಗೂ ಸಂಪತ್ , ಸರಸ್ವತಿ ನಗರ , ಪಾಂಗಾಳ ಇವರನ್ನು ರೈಲ್ವೆ ರಕ್ಷಣಾ ದಳ ನಿರೀಕ್ಷಕ ಶಿವರಾಮ ರಾಥೋಡ್, ಉಪ ನಿರೀಕ್ಷಕಕರಾದ ಸಂತೋಷ್ ಗಾಂವಕರ್,ಮತ್ತು ಸಿಬ್ಬಂದಿ ಆಶ್ವಥ್ , ಗುರುರಾಜ್, ವೇಣು ಮತ್ತು ಲೋಬೋ ಇವರು ಬಂಧಿಸಿ, ರೂ. 50000 ಬೆಲೆ ಬಾಳುವ ಸಾಗುವಾನಿ ಮರದ ತುಂಡುಗಳನ್ನು ವಶಪಡಿಸಿಕೊಂಡಿದ್ದಾರೆ.  ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಯಲವು ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

     

    Share Information
    Advertisement
    Click to comment

    You must be logged in to post a comment Login

    Leave a Reply