Connect with us

    LATEST NEWS

    ಸಾರ್ಥಕ ಜೀವನಕ್ಕೆ ಒಟ್ಟಿಗೇ ವಿದಾಯ ಹೇಳಿದ ದಂಪತಿ….!!

    ಕಾಪು ಅಗಸ್ಟ್ 03: ಐದು ದಶಕ ಸುಖ ದಾಂಪತ್ಯ ಜೀವನ ನಡೆಸಿದ ದಂಪತಿಗಳು, ಕೊನೆಗೆ ಸಾವಿನಲ್ಲೂ ಒಂದಾದ ಘಟನೆ ಕಾಪುವಿನಲ್ಲಿ ನಡೆದಿದೆ. ಪತಿ ನಿಧನದ ಕೆಲವೇ ಗಂಟೆಗಳ ಅಂತರದಲ್ಲಿ ಪತ್ನಿಯೂ ಮೃತಪಟ್ಟಿದ್ದು, ಇಬ್ಬರ ಅಂತಿಮ ಕಾರ್ಯಗಳು ಒಟ್ಟಿಗೇ ನಡೆದಿದೆ.


    ಕಾಪು ತಾಲೂಕಿನ ಬೆಳಪು ಎಂಬಲ್ಲಿ ಈ ಘಟನೆ ನಡೆದಿದೆ. ಕೃಷ್ಣ ಅಲಿಯಾಸ್ ಕುಟ್ಟಿ ಶೆಟ್ಟಿ ಮತ್ತು ಅವರ ಪತ್ನಿ ರೇವತಿ ಶೆಟ್ಟಿ, ಅವರು ದಿನದ ಅಂತರದಲ್ಲಿ ಮೃತಪಟ್ಟ ದಂಪತಿ. ಕೃಷ್ಣ ಅವರು ವಯಸ್ಸಿನ ಕಾರಣದಿಂದ ಆಗಸ್ಟ್‌ 2ರ ಬೆಳಗ್ಗೆ ಮೃತಪಟ್ಟಿದ್ದಾರೆ. ರೇವತಿ ಅವರು ಆಗಸ್ಟ್‌ 3ರ ಬೆಳಗ್ಗೆ ಮೃತಪಟ್ಟಿದ್ದಾರೆ. ಮೃತರು ಇಬ್ಬರು ಪುತ್ರರು, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

    ಕೃಷ್ಣ ಅವರು ಮೃತಪಟ್ಟ ಹಿನ್ನಲೆ ಮುಂಬೈ ಮತ್ತು ಇತರ ಸ್ಥಳಗಳಲ್ಲಿ ವಾಸವಾಗಿರುವ ಅವರ ಮಕ್ಕಳ ಬರುವಿಕೆಗೆ ಕಾಯಲಾಗಿತ್ತು, ಆದರೆ ಅದಕ್ಕೂ ಮುನ್ನ ಮರುದಿನ ಬೆಳಗ್ಗೆ ಅವರ ಪತ್ನಿಯೂ ಸಾವನ್ನಪ್ಪಿದ್ದರು. ಹೀಗಾಗಿ ಇಬ್ಬರ ಅಂತಿಮ ವಿಧಿವಿಧಾನಗಳನ್ನು ಮಕ್ಕಳು, ಕುಟುಂಬದವರು ಸೇರಿ ನೇರವೆರಿಸಿದ್ದಾರೆ. ಐದು ದಶಕಗಳ ದಾಂಪತ್ಯ ಜೀವನದ ಬಳಿಕ ದಂಪತಿಗಳೂ ಸಾವಿನಲ್ಲೂ ಒಂದಾಗಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply