Connect with us

    LATEST NEWS

    ಉಡುಪಿ – ಹಪ್ತಾ ನೀಡುವಂತೆ ಬೆದರಿಕೆಯೊಡ್ಡಿ ಬಾರ್ ಮ್ಯಾನೇಜರ್ ಮೇಲೆ ಹಲ್ಲೆ

    ಉಡುಪಿ ಅಕ್ಟೋಬರ್ 22: ಹಪ್ತಾ ನೀಡುವಂತೆ ಬಾರ್ ಮ್ಯಾನೇಜರ್ ಗೆ ಬೆದರಿಕೆಯೊಡ್ಡಿ ಆತನ ಮೇಲೆ ಹಲ್ಲೆ ನಡೆಸಿದ ಘಟನೆ ಉಡುಪಿಯ‌ ಶಿರೂರು ಎಂಬಲ್ಲಿ ನಡೆದಿದೆ.


    ಇಲ್ಲಿನ ನೀರ್ಗದ್ದೆಯ ಸಿಲ್ವರ್ ಅರ್ಚ್ ಫ್ಯಾಮಿಲಿ ಬಾರ್ & ರೆಸ್ಟೊರೆಂಟ್ ಗೆ ಬಂದಿದ್ದ ಕಿರಣ್ ಪೂಜಾರಿ ಹಾಗೂ ಅಶೋಕ್ ಎಂಬವರು ಬಾರ್ ಮ್ಯಾನೇಜರ್ ಅಶ್ವೀಜ್ ಶೆಟ್ಟಿ ಬಳಿ ಹಫ್ತಾ ಕೊಡುವಂತೆ ಬೆದರಿಕೆಯೊಡ್ಡಿದ್ದಾರೆ. ಈ ವೇಳೆಯಲ್ಲಿ ಮ್ಯಾನೇಜರ್ ಹಪ್ತಾ ನೀಡಲು ನಿರಾಕರಿಸಿದಾಗ, ಏಕಾಏಕಿ ಬಾಟಲಿಯಿಂದ ಅಶ್ವಿಜ್ ಮೇಲೆ ಹಲ್ಲೆ ನಡೆಸಿದ್ದಾರೆ. ಅಲ್ಲದೇ ಸ್ಥಳಕ್ಕೆ ಬಂದ ಮಾಲಿಕ ಬಾರ್ ಮಾಲಿಕ, ಅಣ್ಣಪ್ಪ ಶೆಟ್ಟಿ , ರವಿ ಶೆಟ್ಟಿ, ಪ್ರಶಾಂತ್ ಶೆಟ್ಟಿ ಹಾಗೂ ಅಕ್ಷಯ ಆಚಾರ್ಯ ಅವರೊಂದಿಗೆ ಜಗಳಕ್ಕಿಳಿದು, ತಲವಾರು ಬೀಸಿದ ಪರಿಣಾಮ ರವಿ ಶೆಟ್ಟಿ ಪ್ರಶಾಂತ್ ಶೆಟ್ಟಿಯವರಿಗೂ ಗಾಯಗಳಾಗಿವೆ. ಘಟನೆ ಕುರಿತು ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply