Connect with us

    LATEST NEWS

    ಉಡುಪಿ ಮಗು ಅಪಹರಣ – ಪೊಲೀಸರ ಕ್ಷೀಪ್ರ ಕಾರ್ಯಾಚರಣೆಯಲ್ಲಿ ಮಗುವಿನ ರಕ್ಷಣೆ

    ಉಡುಪಿ ಜುಲೈ 12: ನಿನ್ನೆ ಕರಾವಳಿ ಬೈಪಾಸ್ ನಿಂದ ಅಪಹರಣಕ್ಕೊಳಗಾಗಿದ್ದ ಮಗುವನ್ನು ಪತ್ತೆ ಹಚ್ಚುವಲ್ಲಿ ಉಡುಪಿ ಪೊಲೀಸರು ಯಶಸ್ವಿಯಾಗಿದ್ದು, ಅಪಹರಣಕಾರನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ಬಾಗಲಕೋಟೆಯ ಪರಶು ಎಂದು ಗುರುತಿಸಲಾಗಿದೆ. ಈತನನ್ನು ಕುಮಟಾ ರೈಲ್ವೆ ನಿಲ್ದಾಣದಲ್ಲಿ ಸ್ಥಳೀಯ ಪೊಲೀಸರ ಸಹಕಾರದೊಂದಿಗೆ ಭಾನುವಾರ ರಾತ್ರಿ ವಶಕ್ಕೆ ಪಡೆಯಲಾಗಿದೆ.


    ಆರೋಪಿ ಪರಶು ನಿನ್ನೆ ಬೆಳಿಗ್ಗೆ ಕರಾವಳಿ ಬೈಪಾಸ್‌ನಿಂದ ಸಿಟಿಬಸ್‌‌ನಲ್ಲಿ ಪ್ರಯಾಣಿಸಿ ಸಂತೆಕಟ್ಟೆಯಲ್ಲಿ ಇಳಿದಿದ್ದ . ನಂತರ ಅಲ್ಲಿಂದ ಮಗುವಿನೊಂದಿಗೆ ಬಸ್‌ನಲ್ಲಿ ಭಟ್ಕಳಕ್ಕೆ ಪ್ರಯಾಣಿಸಿದ್ದಾನೆ. ನಂತರ ಅಲ್ಲಿಂದ ದಾಂಡೇಲಿಗೆ ಹೋಗುವ ರೈಲಿಗೆ ಹತ್ತಿದ್ದು, ನಂತರ ಕುಮಟಾ ರೈಲ್ವೆ ನಿಲ್ದಾಣದಲ್ಲಿ ಇಳಿದಿದ್ದಾನೆ.


    ಮಗು ಅಪಹರಣದ ಪ್ರಕರಣದ ಬೆನ್ನತ್ತಿದ್ದ ಪೊಲೀಸರು ಕ್ಷೀಪ್ರ ಕಾರ್ಯಾಚರಣೆ ನಡೆಸಿದ್ದತು, ಟ್ಕಳ, ಕುಮಟಾ ಸೇರಿದಂತೆ ಕಾರವಾರ ಪೊಲೀಸರು ಹುಡುಕಾಟ ನಡೆಸಿದ್ದು, ರಾತ್ರಿ ವೇಳೆ ಕುಮಟಾ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
    ಮಗು ಶಿವರಾಜ್‌ ಹಾಗೂ ಆರೋಪಿಯನ್ನು ಇಂದು ಬೆಳಗ್ಗೆ ಪೊಲೀಸರು ಉಡುಪಿಗೆ ಕರೆ ತಂದಿದ್ದು ವಿಚಾರಣೆ ನಡೆಯುತ್ತಿದೆ.

     

    Share Information
    Advertisement
    Click to comment

    You must be logged in to post a comment Login

    Leave a Reply