Connect with us

LATEST NEWS

ಉಡುಪಿ : ಆಟೋ ಚಾಲಕನ ಮೇಲೆ ದೌರ್ಜನ್ಯದ ಆರೋಪ, ಜಯಲಕ್ಷ್ಮಿ ಸಿಲ್ಕ್ಸ್ಎದುರು ಆಟೋಚಾಲಕರ ಪ್ರತಿಭಟನೆ..!

ಉಡುಪಿ :  ಉಡುಪಿ ನಗರದ ಬನ್ನಂಜೆ ಜಯಲಕ್ಷ್ಮಿ ಸಿಲ್ಕ್ಸ್ ಮಾಲೀಕರು ಬಡಪಾಯಿ ಅಟೋ ಚಾಲಕನ ಮೇಲೆ ದೌರ್ಜನ್ಯ ನಡೆಸಿದ್ದಾರೆ ಎಂದು ಆರೋಪಿಸಿ ಆಟೋ ಚಾಲಕರು ಡಿಡೀರ್ ಪ್ರತಿಭಟನೆ ನಡೆಸಿದ ಘಟನೆ ಉಡುಪಿಯಲ್ಲಿ ಬುಧವಾರ ನಡೆದಿದೆ.

ಗ್ರಾಹಕನನ್ನು ಕರಕೊಂಡು ಬಂದ ಆಟೋ ಶೋಂ ರೂಂ ಎದುರು ನಿಲ್ಲಿಸಿದಾಗ ಕಟ್ಟಡ ಕಾವಲುಗಾರ ಹಿಂದಿಯಲ್ಲಿ, ಮತ್ತು ಜಯಲಕ್ಷ್ಮೀ ಸಿಲ್ಕ್ಸ್ ಸಿಬಂದಿ ತುಳುವಿನಲ್ಲಿ ಬೈಯ್ದಿದ್ದು ಉತ್ತರವಾಗಿ ಆಟೋ ಚಾಲಕನೂ ಹಿಂದೆ ಪ್ರತ್ಯುತ್ತರ ನೀಡಿದ್ದಾರೆ. ಇದಕ್ಕೆ ಪ್ರತಿಯಾಗಿ ಆಟೋ ಕೀ ತೆಗೆದು ಆಟೋ ರಿಕ್ಷಾಕ್ಕೆ  ವಾಹನಗಳನ್ನು ಅಡ್ಡ ಇಟ್ಟು ಆಟೋ ಚಾಲಕನಿಗೆ ಕಿರುಕುಳ ನೀಡಿದ್ದಾರೆ. ಈ ಮಾಹಿತಿ ಮಾಹಿತಿ ಪಡೆದ ಪರಿಸರದ ಆಟೋ ಚಾಲಕರು ಜಯಲಕ್ಷ್ಮೀ ಸಿಲ್ಕ್ಸ್ ಮುಂದೆ ಡೀಡೀರ್ ಪ್ರತಿಭಟನೆ ನಡೆಸಿ ಶೋ ರೂಂ ಮಾಲಿಕರ ಗೂಂಡಾ ವರ್ತನೆಯನ್ನು ಖಂಡಿಸಿದರು. ಸ್ಥಳಕ್ಕೆ ಆಗಮಿಸಿದ ಪೊಲೀಸರು, ಅಧಿಕಾರಿಗಳು ರಿಕ್ಷಾ ಚಾಲಕರ ಮನ ಒಲಿಸಿ ಕ್ರಮದ ಭರವಸೆ ನೀಡಿದ ಬಳಿಕ ಪ್ರತಿಭಟನೆಯನ್ನು ಹಿಂದಕ್ಕೆ ಪಡೆದರು.

Share Information
Advertisement
Click to comment

You must be logged in to post a comment Login

Leave a Reply