Connect with us

    LATEST NEWS

    ಉಡುಪಿ ಜಿಲ್ಲೆಯಲ್ಲಿ ಒಂದೇ ದಿನ 83 ಪ್ರದೇಶ ಸೀಲ್ ಡೌನ್

    ಜಿಲ್ಲೆಯಲ್ಲಿ ಈಗ ಒಟ್ಟು 201 ಸೀಲ್ ಡೌನ್ ಪ್ರದೇಶ

    ಉಡುಪಿ ಜೂ.5: ಉಡುಪಿಯಲ್ಲಿ ಇಂದು ದಾಖಲಾದ 204 ಕೊರೊನಾ ಪ್ರಕರಣಗಳಿಂದಾಗಿ ಉಡುಪಿ ಜಿಲ್ಲೆಯಲ್ಲಿ ಇಂದು ಒಂದೇ ದಿನ 83 ಪ್ರದೇಶಗಳನ್ನು ಸೀಲ್ ಡೌನ್ ಮಾಡಲಾಗಿದೆ. ರಾಜ್ಯದಲ್ಲೇ ಒಂದೇ ದಿನ ಅತೀ ಹೆಚ್ಚು ಪ್ರದೇಶಗಳನ್ನು ಸೀಲ್ ಡೌನ್ ಉಡುಪಿಯಲ್ಲಿ ಆಗಿದೆ. ಸದ್ಯ ಜಿಲ್ಲೆಯಲ್ಲಿ ಈವರೆಗೆ ಒಟ್ಟು 201 ಪ್ರದೇಶಗಳನ್ನು ಸೀಲ್‌ಡೌನ್ ಮಾಡಿ ಕ್ರಮಕೈಗೊಳ್ಳಲಾಗಿದೆ.

    ಇಂದು ದಾಖಲಾದ ಪ್ರಕರಣಗಳಲ್ಲಿ ಬೈಂದೂರು ತಾಲೂಕಿನ ಶಿರೂರು ಗ್ರಾಮದ 11, ಬಡಾಕೆರೆ- 1, ಮುದೂರು-1, ಯಡ್ತರೆ- 2, ಬಿಜೂರು-6, ಮರವಂತೆ-4, ಕಂಬದಕೋಣೆ -10, ತೆಗ್ಗರ್ಸೆ- 5, ಕಿರಿಮಂಜೇಶ್ವರ ಗ್ರಾಮದ 5 ಪ್ರದೇಶಗಳು ಸೇರಿದಂತೆ ಒಂದೇ ದಿನ 45 ಪ್ರದೇಶಗಳನ್ನು ಸೀಲ್‌ಡೌನ್ ಮಾಡಲಾಗಿದೆ. ಈ ಮೂಲಕ ತಾಲೂಕಿನಲ್ಲಿ ಒಟ್ಟು 93 ಪ್ರದೇಶಗಳು ಕಂಟೈನ್‌ಮೆಂಟ್ ವಲಯಗಳಾಗಿವೆ.

    ಬ್ರಹ್ಮಾವರ ತಾಲೂಕಿನ ವಡ್ಡರ್ಸೆ ಗ್ರಾಮದ ಮಧುವನ ಮತ್ತು ನಡೂರು ಗ್ರಾಮದ ಮೂಡಬೆಟ್ಟು ಎಂಬಲ್ಲಿ ಕಂಟೈನ್‌ಮೆಂಟ್ ವಲಯವನ್ನಾಗಿ ಘೋಷಿಸಿ, ಸೋಂಕಿತರ ಮನೆ ಸಹಿತ ತಲಾ ಎರಡು ಮನೆಗಳನ್ನು ಸೀಲ್‌ಡೌನ್ ಮಾಡಲಾಗಿದೆ. ಬ್ರಹ್ಮಾವರ ತಾಲೂಕಿನಲ್ಲಿ ಈವರೆಗೆ ಒಟ್ಟು 11 ಪ್ರದೇಶಗಳನ್ನು ಸೀಲ್‌ಡೌನ್ ಮಾಡಲಾಗಿದೆ.

    ಉಡುಪಿ ತಾಲೂಕಿನ ಪೆರ್ಡೂರು ಗ್ರಾಮದಲ್ಲಿ ಎರಡು, ಬೊಮ್ಮರಬೆಟ್ಟು ಗ್ರಾಮದಲ್ಲಿ ಮೂರು, ಮೂಡನಿಡಂಬೂರು ಮತ್ತು ಮಲ್ಪೆಯಲ್ಲಿ ತಲಾ ಒಂದು ಪ್ರದೇಶಗಳನ್ನು ಸೀಲ್‌ಡೌನ್ ಮಾಡಲಾಗಿದೆ. ಕಾಪು ತಾಲೂಕಿನ ಶಿರ್ವ ಗ್ರಾಮದ ಮಾಣಿಬೆಟ್ಟು, ಸೊಂಪು, ಹಟ್ಟಿಂಜೆ, ಎಡ್ಮೇರ್, ನಾಯ್ಡಟ್ಟು ಒಟ್ಟು 5 ಕಡೆಗಳಲ್ಲಿ ಹಾಗೂ ಮುದರಂಗಡಿ ಮತ್ತು ಉಚ್ಚಿಲ ಗ್ರಾಮದಲ್ಲಿ ತಲಾ ಒಂದು ಪ್ರದೇಶದಲ್ಲಿ ಕಂಟೇನ್‌ಮೆಂಟ್ ವಲಯ ವನ್ನಾಗಿ ಮಾಡಿ ಸೀಲ್‌ಡೌನ್ ಮಾಡಲಾಗಿದೆ.


    ಹೆಬ್ರಿ ತಾಲೂಕಿನ ಮುದ್ರಾಡಿ ಗ್ರಾಮದ ಎರಡು ಪ್ರತ್ಯೇಕ ಪ್ರದೇಶ ಮತ್ತು ಹೆಬ್ರಿ ಗ್ರಾಮದ ತೇಲಂಜೆ ಎಂಬಲ್ಲಿ ಒಂದು ಪ್ರದೇಶವನ್ನು ಸೀಲ್‌ಡೌನ್ ಮಾಡಲಾಗಿದೆ. ಹೆಬ್ರಿ ತಾಲೂಕಿನಲ್ಲಿ ಈವರೆಗೆ ಒಟ್ಟು ನಾಲ್ಕು ಕಡೆಗಳಲ್ಲಿ ಕಂಟೈನ್ ಮೆಂಟ್ ವಲಯ ಎಂಬುದಾಗಿ ಘೋಷಿಸಲಾಗಿದೆ.

    ಕಾರ್ಕಳ ತಾಲೂಕಿನ ಎರ್ಲಪಾಡಿ ಮತ್ತು ಮಿಯ್ಯರು ಗ್ರಾಮಗಳಲ್ಲಿ ತಲಾ ಎರಡು, ಹಿರ್ಗಾನ, ಮಾಳ, ಪಳ್ಳಿ, ಬೈಲೂರು, ಕಣಜಾರು, ರೆಂಜಾಳ, ಇರ್ವತ್ತೂರು ಗ್ರಾಮದ ತಲಾ ಒಂದು ಸೇರಿದಂತೆ ಇಂದು ಒಟ್ಟು 11 ಪ್ರದೇಶ ಗಳಲ್ಲಿ ಕಂಟೈನ್‌ಮೆಂಟ್ ವಲಯವನ್ನು ಘೋಷಿಸಿ ಸೀಲ್‌ಡೌನ್ ಮಾಡಲಾಗಿದೆ. ತಾಲೂಕಿನಲ್ಲಿ ಈವರೆಗೆ ಒಟ್ಟು 24 ಕಡೆಗಳಲ್ಲಿ ಸೀಲ್‌ಡೌನ್ ಮಾಡಿ ಆದೇಶ ಹೊರಡಿಸಲಾಗಿದೆ.

    ಕುಂದಾಪುರ ತಾಲೂಕಿನ ಗುಲ್ವಾಡಿ ಗ್ರಾಮದಲ್ಲಿ ಎರಡು, ತ್ರಾಸಿ, ವಂಡ್ಸೆ, ಚಿತ್ತೂರು, ಕೆಂಚನೂರು, ಕಾವ್ರಾಡಿ, ಹೊಸಂಗಡಿ ಗ್ರಾಮಗಳ ತಲಾ ಒಂದರಂತೆ ಒಟ್ಟು ಎಂಟು ಪ್ರದೇಶವನ್ನು ಸೀಲ್‌ಡೌನ್ ಮಾಡಲಾಗಿದೆ. ಕುಂದಾಪುರ ತಾಲೂಕಿನಲ್ಲಿ ಈವರೆಗೆ ಒಟ್ಟು 41 ಪ್ರದೇಶಗಳನ್ನು ಕಂಟೇನ್‌ಮೆಂಟ್ ವಲಯ ವನ್ನಾಗಿ ಘೋಷಿಸಲಾಗಿದೆ ಎಂದು ಆಯಾ ತಾಲೂಕಿನ ತಶೀಲ್ದಾರರು ಮಾಹಿತಿ ನೀಡಿದರು.

    Share Information
    Advertisement
    Click to comment

    You must be logged in to post a comment Login

    Leave a Reply