LATEST NEWS
ಹೆಬ್ರಿ ಅಭಯಾರಣ್ಯದಲ್ಲಿ ಶಿಕಾರಿಗೆ ತೆರಳಿದ್ದ ಇಬ್ಬರ ಬಂಧನ ಮೂವರು ಪರಾರಿ
ಹೆಬ್ರಿ ಅಭಯಾರಣ್ಯದಲ್ಲಿ ಶಿಕಾರಿಗೆ ತೆರಳಿದ್ದ ಇಬ್ಬರ ಬಂಧನ ಮೂವರು ಪರಾರಿ
ಉಡುಪಿ ಅಕ್ಟೋಬರ್ 10: ಹೆಬ್ರಿ ತಾಲೂಕಿನ ಅಭಯಾರಣ್ಯದಲ್ಲಿ ಶಿಕಾರಿಗೆ ತೆರಳಿದ್ದ ಇಬ್ಬರನ್ನು ಹೆಬ್ರಿ ವಲಯದ ಅರಣ್ಯಾಧಿಕಾರಿಗಳು ಬಂಧಿಸಿದ ಘಟನೆ ನಡೆದಿದೆ.
ಬಂಧಿತರನ್ನು ಕೇರಳದ ಪಾತೂರು ನಿವಾಸಿ ಅಝೀಜ್, ವಿಟ್ಲ ಪಡ್ನೂರು ಗ್ರಾಮದ ಕುಕ್ಕಿಲ ನಿವಾಸಿ ಸಾಹುಲ್ ಹಮೀದ್ ಎಂದು ಗುರುತಿಸಲಾಗಿದೆ.
ಬಂಧಿತರು ಹೆಬ್ರಿ ತಾಲೂಕಿನ ಅಭಯಾರಣ್ಯದಲ್ಲಿ ಅಳಿವಿನ ಅಂಚಿನಲ್ಲಿರುವ ಬರಿಂಕ ಭೇಟೆಯಾಡಿದ್ದು, ಖಚಿತ ಮಾಹಿತಿ ಹಿನ್ನಲೆಯಲ್ಲಿ ದಾಳಿ ನಡೆಸಿದ ಹೆಬ್ರಿ ವಲಯ ಅರಣ್ಯಾಧಿಕಾರಿಗಳು ಕಬ್ಬಿನಾಲೆ ಅರಣ್ಯಪ್ರದೇಶದಲ್ಲಿ ಆರೋಪಿಗಳನ್ನು ವಶಕ್ಕೆ ಪಡೆದರು.
ಈ ಇಬ್ಬರು ಆರೋಪಿಗಳ ಜೊತೆ ಇದ್ದ ಇನ್ನೂ ಮೂವರು ಪರಾರಿಯಾಗಿದ್ದಾರೆ. ಬಂಧಿತ ಆರೋಪಿಗಳಿಂದ ಶಿಕಾರಿಗೆ ಬಳಸಿದ ಬಂದೂಕನ್ನು ಅರಣ್ಯಾಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
You must be logged in to post a comment Login