Connect with us

    BELTHANGADI

    ಸಾರ್ವಜನಿಕರ ಎದುರು ತಲ್ವಾರ್ ಹಿಡಿದು ಹೊಡೆದಾಡಿಕೊಂಡ ಎರಡು ಗುಂಪುಗಳು

    ಸಾರ್ವಜನಿಕರ ಎದುರು ತಲ್ವಾರ್ ಹಿಡಿದು ಹೊಡೆದಾಡಿಕೊಂಡ ಎರಡು ಗುಂಪುಗಳು

    ಬೆಳ್ತಂಗಡಿ ಡಿಸೆಂಬರ್ 04: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಗೇರುಕಟ್ಟೆ ಎಂಬಲ್ಲಿ ಸಾರ್ವಜನಿಕರ ಎದುರೇ ತಲ್ವಾರ್ ಹಿಡಿದು ಸೀನಿಮಿಯ ರೀತಿಯಲ್ಲಿ ಹೊಡೆದಾಡಿಕೊಂಡ ಘಟನೆ ನಡೆದಿದೆ.

    ದಕ್ಷಿಣಕನ್ನಡ ಜಿಲ್ಲೆಯ ಬೆಳ್ತಂಗಡಿಯ ಗೆರುಗಟ್ಟೆ ಬಸ್ ಸ್ಟಾಂಡ್ ಎದುರೇ ಈ ಗ್ಯಾಂಗ್ ವಾರ್ ನಡೆದಿದೆ,

    ಗೇರುಕಟ್ಟೆ ಯಾಕೂಬ್ ತಂಡ ಹಾಗೂ ಗೇರುಕಟ್ಟೆಯ ಕರೀಮ್ ತಂಡ ದ ನಡುವಿನ ಹಳೆ ವೈಷಮ್ಯ ಈ ಘಟನೆಗೆ ಕಾರಣ ಎಂದು ಹೇಳಲಾಗಿದೆ.

    ಸುಮಾರು 8 ಜನರ ಯಾಕೂಬ್ ತಂಡದಿಂದ 5 ಜನರಿದ್ದ ಕರೀಮ್ ತಂಡ ಮೇಲೆ ಲಾಂಗು ಮಚ್ಚುಗಳಿಂದ ಅಟ್ಯಾಕ್ ಮಾಡಿದೆ.

    ಗೇರುಕಟ್ಟೆ ಬಸ್ ಸ್ಟಾಂಡ್ ಬಳಿ ಸಾರ್ವಜನಿಕರ ಎದುರೇ ಲಾಂಗು ಮಚ್ಚುಗಳಿಂದ ಗ್ಯಾಂಗ್ ವಾರ್ ನಡೆದಿದ್ದು, ತಂಡಗಳ ಹೊಡೆದಾಟ ನೋಡಿದ ಜನರು ಪ್ರಾಣ ಭಯದಿಂದ ದಿಕ್ಕಪಾಲಾಗಿ ಓಡಿದ್ದಾರೆ.

    ಈ ತಲ್ವಾರ್ ಕಾಳಗದಲ್ಲಿ 3 ಜನರಿಗೆ ಗಾಯವಾಗಿದೆ.ಗಾಯಗೊಂಡವರು ಗೇರುಕಟ್ಟೆ ಕರೀಮ್ ತಂಡದವರು ಎಂದು ಹೇಳಲಾಗಿದೆ.

    ಗಾಯಗೊಂಡವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಗೊಂಡವರು ತಸ್ಲಿಮ್, ಅಸಿಫ್ ಮತ್ತು ಸಿಯಾಬ್ ಎಂದು ಗುರುತಿಸಲಾಗಿದೆ. ಬೆಳ್ತಂಗಡಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

     

    Share Information
    Advertisement
    Click to comment

    You must be logged in to post a comment Login

    Leave a Reply