Connect with us

    LATEST NEWS

    ಸುರತ್ಕಲ್ – ಸಮುದ್ರಪಾಲಾದ ಇಬ್ಬರು ಯುವತಿಯರು….!!

    ಸುರತ್ಕಲ್ ಎಪ್ರಿಲ್ 10: ಸುರತ್ಕಲ್ ನ ಎನ್ಐಟಿಕೆ ಬೀಚ್ ನಲ್ಲಿ ಇಬ್ಬರು ಯುವತಿಯರು ಸಮುದ್ರ ಪಾಲಾಗಿರುವ ಘಟನೆ ನಡೆದಿದೆ.


    ಮೃತರನ್ನು ಮಂಗಳೂರು ಶಕ್ತಿ ನಗರ ನಿವಾಸಿ ವೈಷ್ಣವಿ (21) ಹಾಗೂ ತ್ರಿಶಾ (17) ಎಂದು ಗುರುತಿಸಲಾಗಿದೆ. ಮೃತ ವೈಷ್ಣವಿ ಅವರ ತಂದೆ ವೆಂಕಟೇಶ್ ಎಂಬವರನ್ನು ರಕ್ಷಣೆ ಮಾಡಲಾಗಿದೆ. ಮೃತರು ಅಣ್ಣತಮ್ಮಂದಿರ ಮಕ್ಕಳು ಎಂದು ತಿಳಿದು ಬಂದಿದೆ.

    ವೆಂಕಟೇಶ್ ಅವರ ಮಾವ ಈಚೆಗೆ ನಿಧನರಾಗಿದ್ದು, ತಿಥಿಯ ಪಿಂಡ ಪ್ರದಾನ ಮಾಡಲೆಂದು ಕುಟುಂಬಿಕರು ಎನ್‌ಐಟಿಕೆ ಸಮುದ್ರ ಕಿನಾರೆಗೆ ಬಂದಿದ್ದರು. ಪಿಂಡ ಪ್ರದಾನ ಮಾಡಿದ ಬಳಿಕ ವೆಂಕಟೇಶ್, ಅವರ ಪುತ್ರಿ ವೈಷ್ಣವಿ ಹಾಗೂ ತಮ್ಮನ ಪುತ್ರಿ ತ್ರಿಶಾ ಸಮುದ್ರಕ್ಕೆ ಇಳಿದಿದ್ದಾರೆ. ಈ ಸಂದರ್ಭ ಬಂದ ಬೃಹತ್‌ ಅಲೆಗೆ ಸಿಲುಕಿ ಮೂವರು ಸಮುದ್ರಪಾಲಾದರು. ಸಮೀಪದಲ್ಲಿದ್ದ ಹೋಮ್ ಗಾರ್ಡ್ ಪ್ರಶಾಂತ್ ಮತ್ತು ಸ್ಥಳೀಯ ಯುವಕರು ಧಾವಿಸಿ, ಸಮುದ್ರಪಾಲಾದವರನ್ನು ದಡಕ್ಕೆ ಕರೆ ತಂದಿದ್ದಾರೆ.‌ ಆದರೆ, ತ್ರಿಶಾ ಹಾಗೂ ವೈಷ್ಣವಿ ಮೃತಪಟ್ಟಿದ್ದಾರೆ. ವೆಂಕಟೇಶ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವೈಷ್ಣವಿಯು ನಗರದ ಕಾಲೇಜೊಂದರಲ್ಲಿ ಎಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದರೆ, ತ್ರಿಶಾ ಬೆಂಗಳೂರಿನ ಗುರುಕುಲ ಹೈಸ್ಕೂಲ್‌ನಲ್ಲಿ ವ್ಯಾಸಂಗ‌ ಮಾಡುತ್ತಿದ್ದಳು. ಈ‌ ಸಂಬಂಧ ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

     

    Share Information
    Advertisement
    Click to comment

    You must be logged in to post a comment Login

    Leave a Reply