Connect with us

    LATEST NEWS

    ತುಳುವರ ಆಕ್ರೋಶಕ್ಕೆ ಕಾರಣವಾದ ಅಕಾಡಮಿ ಅಧ್ಯಕ್ಷರ ಖಾಸಗಿ ಫೋಟೋ, ಏನಿದೆ ಈ ಪೋಟೋಗಳಲ್ಲಿ ?

    ಮಂಗಳೂರು ಅಗಸ್ಟ್ 21: ರಾಜ್ಯ ತುಳು ಅಕಾಡಮಿಯ ಅಧ್ಯಕ್ಷ ದಯಾನಂದ ಕತ್ತಲೆಸಾಲೆ ಅವರ ಖಾಸಗಿ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಟೀಕೆಗೆ ಗುರಿಯಾಗಿದೆ. ತುಳು ಸಾಹಿತ್ಯ ಅಕಾಡಮಿಯ ಅಧ್ಯಕ್ಷ ಸ್ಥಾನಕ್ಕಿಂತಲೂ ಇವರು ಓರ್ವ ತುಳುನಾಡಿನಲ್ಲಿ ಆರಾಧಿಸಿಕೊಂಡು ಬರುತ್ತಿರುವ ಭೂತಾರಾಧನೆಯ ನರ್ತಕರಾಗಿದ್ದು, ಈ ರೀತಿಯಾಗಿ ಫೋಟೋದಲ್ಲಿ ವರ್ತಿಸಿರುವುದು ತುಳುನಾಡಿನ ಜನರ ಆಕ್ರೋಶಕ್ಕೆ ಕಾರಣವಾಗಿದೆ.

    ತಮ್ಮ ಪತ್ನಿ ಹಾಗೂ ಪುತ್ರನೊಂದಿಗೆ ತೆಗೆದಿರುವ ಫೋಟೋಗಳನ್ನು ಅವರು ತಮ್ಮ ಫೇಸ್ಬುಕ್ ನಲ್ಲಿ ಹಂಚಿಕೊಂಡಿದ್ದಾರೆ. ಇದಕ್ಕೆ ಭಾರೀ ವಿರೋಧ ವ್ಯಕ್ತವಾಗಿದ್ದು, ಭೂತಾರಾಧನೆಯಲ್ಲಿ ತೊಡಗಿಕೊಂಡಿರುವ ದಯಾನಂದ ಕತ್ತಲ್ ಸರ್  ಅವರಿಗೆ ತಮ್ಮದೇ ಆದ ಕೆಲವು ಕಟ್ಟುಪಾಡುಗಳಿವೆ‌. ದೈವದ ಬಳೆ ತೊಡಿಸಿಕೊಂಡಿರುವ ಇವರು ಈ ರೀತಿಯಾಗಿ ವರ್ತಿಸಲು ಅವಕಾಶವಿಲ್ಲ ಎನ್ನುವುದು ತುಳುನಾಡಿನ ಭೂತಾರಾಧನೆಯನ್ನು ಆಚರಿಸಿಕೊಂಡು ಬರುತ್ತಿರುವ ಜನರ ಆರೋಪವಾಗಿದೆ.

    ಅಲ್ಲದೆ ಒಂದು ಫೋಟೋದಲ್ಲಿ ಇವರು ತಮ್ಮ ಪತ್ನಿಯ ತಲೆಗೂದಲನ್ನು ಹಿಡಿದು ಭದ್ರಕಾಳಿಯಂತೆ ಫೋಸ್ ಕೊಟ್ಟಿರುವುದೂ ತುಳುವರ ಆಕ್ರೋಶಕ್ಕೆ ಕಾರಣವಾಗಿದೆ. ತಮ್ಮ ವೃತ್ತಿ ಹಾಗೂ ಅರಾಧನೆಯನ್ನು ತಾವೇ ಸರಿಯಾಗಿ ಆಚರಿಸಿಕೊಂಡು ಬರದವರು ಉಳಿದವರಿಗೆ ಯಾವ ರೀತಿಯಲ್ಲಿ ಮಾರ್ಗದರ್ಶನ ಮಾಡಲಿದ್ದಾರೆ ಎನ್ನುವ ಪ್ರಶ್ನೆಯೂ ಕೇಳಿ ಬರಲಾರಂಭಿಸಿದೆ.

    Share Information
    Advertisement
    Click to comment

    You must be logged in to post a comment Login

    Leave a Reply