Connect with us

    LATEST NEWS

    ಸೆಲ್ಪಿ ಕ್ರೆಜ್ ಹಿನ್ನಲೆ ಶಬರಿಮಲೆಯಲ್ಲಿ ಮೊಬೈಲ್ ನಿಷೇಧ

    ಸೆಲ್ಪಿ ಕ್ರೆಜ್ ಹಿನ್ನಲೆ ಶಬರಿಮಲೆಯಲ್ಲಿ ಮೊಬೈಲ್ ನಿಷೇಧ

    ಕೇರಳ ಡಿಸೆಂಬರ್ 5: ಅಯ್ಯಪ್ಪ ಸ್ವಾಮಿಯ ಪವಿತ್ರ ಯಾತ್ರಾ ಸ್ಥಳ ಶಬರಿಮಲೆ ದೇವಸ್ಥಾನದ ಆವರಣದಲ್ಲಿ ಮೊಬೈಲ್ ನಿಷೇಧ ಹೇರಿ ತಿರುವಾಂಕೂರು ದೇವಸ್ವಂ ಮಂಡಳಿ ಆದೇಶಿಸಿದೆ.

    ಈಗಾಗಲೇ ಶಬರಿಮಲೆ ದೇವಸ್ಥಾನದ ಆವರಣದಲ್ಲಿ ಮೊಬೈಲ್ ಬಳಕೆ ಮೇಲೆ ನಿಷೇಧ ಇತ್ತು. ಆದರೆ ಪರಿಣಾಮಕಾರಿ ಜಾರಿ ಮಾಡಿರಲಿಲ್ಲ. ಇತ್ತೀಚಿನ ದಿನಗಳಲ್ಲಿ ದೇಗುಲದ ಆವರಣದಲ್ಲಿ ಮೊಬೈಲ್ ಬಳಕೆ ಹೆಚ್ಚಾಗಿದ್ದು, ಎಷ್ಟೇ ನಿಯಂತ್ರಿಸಿದರೂ ಭಕ್ತರು ಅಯ್ಯಪ್ಪ ಸ್ವಾಮಿ ವಿಗ್ರಹದ ಮುಂದೆ ನಿಂತು ಫೋಟೋ ಮತ್ತು ಸೆಲ್ಫಿಕ್ಲಿಕ್ಕಿಸಿಕೊಳ್ಳುತ್ತಿರುತ್ತಾರೆ.

    ಇದರಿಂದ ಇತರೆ ಭಕ್ತರಿಗೆ ತೊಂದರೆಯಾಗುತ್ತಿದ್ದು, ಈ ಹಿನ್ನಲೆಯಲ್ಲಿ ಮೊಬೈಲ್ ನಿಷೇಧವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಆದೇಶಿಸಲಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply