LATEST NEWS
ತೌಕ್ತೆ ಚಂಡಮಾರುತದಿಂದ ಮರವಂತೆ, ಉಪ್ಪುಂದದಲ್ಲಿ ಕಡಲ್ಕೊರೆತ… ಭಾರಿ ಹಾನಿ
ಉಡುಪಿ, ಮೇ 15: ತೌಕ್ತೆ ಚಂಡಮಾರುತದಿಂದ ಮರವಂತೆಯಲ್ಲಿ ಭಾರಿ ಹಾನಿ ಸಂಭವಿಸಿದೆ. ಉಡುಪಿಯಲ್ಲಿ ತೌಕ್ತೆ ಚಂಡಮಾರುತ ಅಬ್ಬರ ಹೆಚ್ಚಾಗಿದ್ದು, ಮರವಂತೆ, ಉಪ್ಪುಂದದಲ್ಲಿ ಕಡಲ್ಕೊರೆತ ಉಂಟಾಗಿದೆ.
ತೌಕ್ತೆ ಚಂಡಮಾರುತ ಅಬ್ಬರಕ್ಕೆ ಸಮುದ್ರದ ಅಲೆಗಳು ತೆಂಗಿನ ಮರಗಳನ್ನು ಉರುಳಿಸಿದ್ದು, ಮೀನುಗಾರಿಕಾ ಶೆಡ್ಗಳನ್ನು ಸ್ಥಳೀಯರು ಸ್ಥಳಾಂತರ ಮಾಡಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಬಲೆ, ಟಬ್, ಹಗ್ಗ, ಐಸ್ ಬಾಕ್ಸ್ ಗಳನ್ನು ಬೆರೆಡೆಗೆ ಸ್ಥಳಾಂತರ ಮಾಡಿದ್ದಾರೆ.
ಪಡುಕೆರೆಯಲ್ಲೂ ಕಡಲ್ಕೊರೆತ ತೀವ್ರಗೊಂಡಿದ್ದು, ತಡೆಗೋಡೆಗೆ ಕಡಲಿನ ಭಾರೀ ಗಾತ್ರದ ತೆರೆಗಳು ಅಪ್ಪಳಿಸುತ್ತಿದೆ. ತ್ರಾಸಿ, ಮಡಿಕಲ್ ಸಮೀಪದಲ್ಲೂ ಜನರನ್ನು ಸ್ಥಳಾಂತರ ಮಾಡಲಾಗುತ್ತಿದೆ.
Video:
You must be logged in to post a comment Login