Connect with us

    LATEST NEWS

    ದಕ್ಷಿಣಕನ್ನಡದಲ್ಲಿ ಮೂರನೇ ಬಲಿ ಪಡೆದ ಕೊರೊನಾ

    ದಕ್ಷಿಣಕನ್ನಡದಲ್ಲಿ ಮೂರನೇ ಬಲಿ ಪಡೆದ ಕೊರೊನಾ

    ಮಂಗಳೂರು ಎಪ್ರಿಲ್ 30: ಮಹಾಮಾರಿ ಕೊರೊನಾ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಮೂರನೇ ಬಲಿ ಪಡೆದಿದೆ. ಬಂಟ್ವಾಳದ ಕೊರೋನಾ ಪೀಡಿತ ವೃದ್ದೆ ಚಿಕಿತ್ಸೆ ಫಲಿಸದೇ ಇಂದು ಮಂಗಳೂರಿನ ವೆನ್ ಲಾಕ್ ಕೋವಿಡ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

    ಬಂಟ್ವಾಳ ಕಸಬಾದ 69 ವರ್ಷದ P-409 ವೃದ್ದೆಗೆ ಎಪ್ರಿಲ್ 21ರಂದು ಕೊರೋನಾ ಸೋಂಕು ಹಿನ್ನೆಲೆ ಆಸ್ಪತ್ರೆಗೆ ದಾಖಲಾಗಿದ್ದರು.
    ಇವರಿಗೆ ಎಪ್ರಿಲ್ 19ರಂದು ಸಾವನ್ನಪ್ಪಿದ್ದ ಬಂಟ್ವಾಳದ ಮಹಿಳೆಯ ಪಕ್ಕದ ಮನೆಯ ನಿವಾಸಿಯಾಗಿದ್ದ ಇವರಿಗೆ ಕೊರೊನಾ ಸೊಂಕು ಹರಡಿತ್ತು.

    ಮಹಾಮಾರಿ ಕೊರೊನಾ ಬಂಟ್ವಾಳ ಕಸಬಾ ಗ್ರಾಮದಲ್ಲೇ ಮೂರು ಬಲಿ ಪಡೆದಿದೆ, ಎಪ್ರಿಲ್ 19ರಂದು ಬಂಟ್ವಾಳ ಕಸಬಾದ ಮಹಿಳೆ ಎಪ್ರಿಲ್ 23 ರಂದು ಮಹಿಳೆಯ ಅತ್ತೆ ಮತ್ತು ಇಂದು ನೆರೆಮನೆಯ ವೃದ್ದೆ ಬಲಿಯಾಗಿದ್ದಾರೆ. ಸದ್ಯ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಸೋಂಕಿತರು 22, ಗುಣಮುಖರು 12, ಮೃತರು 3, ಚಿಕಿತ್ಸೆ ಪಡೆಯುತ್ತಿರುವವಠು 7.

    Share Information
    Advertisement
    Click to comment

    You must be logged in to post a comment Login

    Leave a Reply