UDUPI
ಚಿನ್ನದ ವ್ಯಾಪಾರಿಯ ಮನೆಯಲ್ಲಿ ಕಳ್ಳತನ
ಚಿನ್ನದ ವ್ಯಾಪಾರಿಯ ಮನೆಯಲ್ಲಿ ಕಳ್ಳತನ
ಉಡುಪಿ ಫೆಬ್ರವರಿ 19: ಚಿನ್ನದ ವ್ಯಾಪಾರಿಯ ಮನೆ ದರೋಡೆ ಮಾಡಿ ಲಕ್ಷಾಂತರ ರೂಪಾಯಿ ಮೌಲ್ಯದ ನಗದು ಚಿನ್ನಾಭರಣ ದೋಚಿದ ಘಟನೆ ಉಡುಪಿಯಲ್ಲಿ ನಡೆದಿದೆ.
ಉಡುಪಿಯ ಶ್ರೀಕೃಷ್ಣ ಮಠದ ರಥಬೀದಿ ಬಳಿ ಇರುವ ಚಿನ್ನದ ವ್ಯಾಪಾರಿ ಸೂರ್ಯಕುಮಾರ್ ಶೇಟ್ ಮನೆಯಲ್ಲಿ ಈ ಕಳ್ಳತನ ನಡೆದಿದೆ. ಮನೆ ಮಾಲಕ ಆಸ್ಪತ್ರೆಗೆ ದಾಖಲಾಗಿದ್ದ ಹಿನ್ನಲೆಯಲ್ಲಿ ಮನೆಯಲ್ಲಿ ಯಾರೂ ಇಲ್ಲದ ಸಂದರ್ಭ ನೋಡಿ ಕಳ್ಳರು ಮನೆಯ ಬೀಗ ಒಡೆದು, ಬೆಡ್ ರೂಮ್ ನಲ್ಲಿದ್ದ ಚಿನ್ನಾಭರಣ, ನಗದು ಹಾಗೂ ಹಳೆಯ ಚಿನ್ನದ ನಾಣ್ಯಗಳನ್ನು ಕಳವು ಮಾಡಿದ್ದಾರೆ.
2012ರಲ್ಲಿ ಕೂಡ ಇದೇ ಮನೆಯಲ್ಲಿ ಕಳ್ಳತನ ನಡೆದಿತ್ತು. ಈಗ ಮತ್ತೆ ಕಳ್ಳತನ ವಾಗಿದೆ. ಶ್ವಾನದಳ ಹಾಗೂ ಬೆಳರಚ್ಚು ತಜ್ಞರ ತಂಡ ಸ್ಥಳದ ಪರಿಶೀಲನೆ ನಡೆಸಿದ್ದಾರೆ. ಉಡುಪಿ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
You must be logged in to post a comment Login