LATEST NEWS
ಕಳ್ಳತನ ನಡೆಸಲು ಬಂದ ಕಳ್ಳರ ಬೆನ್ನಟ್ಟಿದ ಸ್ಥಳೀಯರು
ಕಳ್ಳತನ ನಡೆಸಲು ಬಂದ ಕಳ್ಳರ ಬೆನ್ನಟ್ಟಿದ ಸ್ಥಳೀಯರು
ಮಂಗಳೂರು ಡಿಸೆಂಬರ್ 5:ಉಳ್ಳಾಲದಲ್ಲಿ ತಡರಾತ್ರಿ ಕಳವು ನಡೆಸಲು ಯತ್ನಿಸುತ್ತಿದ್ದ ಕಳ್ಳರ ತಂಡವನ್ನು ಸ್ಥಳೀಯರು ಬೆನ್ನಟ್ಟಿರುವ ಘಟನೆ ಉಳ್ಳಾಲ ಕನೀರ್ ತೋಟ ಎಂಬಲ್ಲಿ ನಡೆದಿದೆ.
ಮದನಿ ನಗರದವರು ಎನ್ನಲಾದ ಮೂವರ ತಂಡ ನಿನ್ನೆ ತಡ ರಾತ್ರಿ ಕಳವಿಗೆ ಯತ್ನಿಸುತ್ತಿರುವುದು ಸ್ಥಳಿಯರ ಗಮನಕ್ಕೆ ಬಂದಿದ್ದು, ಕೂಡಲೇ ಕಾರ್ಯ ಪ್ರವರ್ತರಾದ ಸ್ಥಳೀಯ ಯುವಕರು ಕಳ್ಳರನ್ನು ಬೆನ್ನಟ್ಟಿದ್ದಾರೆ.
ಕೊನೆಗೂ ಮೂವರಲ್ಲಿ ಒಬ್ಬನನ್ನು ಹಿಡಿಯಲು ಯಶಸ್ವಿಯಾಗಿದ್ದು ಕಳ್ಳನನ್ನು ಉಳ್ಳಾಲ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ,ತೌಸಿಕ್ ಬಂಧಿತ ಆರೋಪಿಯಾಗಿದ್ದಾನೆ. ಉಳ್ಳಾಲ ಪ್ರದೇಶದಲ್ಲಿ ಕಳೆದ ಕೆಲವು ದಿನಗಳಿಂದ ನಿರಂತರ ಕಳ್ಳತನ ವಾಗುತ್ತಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
You must be logged in to post a comment Login