LATEST NEWS
ಕ್ರಿಕೆಟ್ ಆಡುತ್ತಿದ್ದ ವೇಳೆ ಕುಸಿದು ಬಿದ್ದು ಆಟಗಾರ ಸಾವು
ಮಂಜೇಶ್ವರ, ಡಿಸೆಂಬರ್ 16 : ಆಟಗಾರನೊಬ್ಬ ಕ್ರಿಕೆಟ್ ಆಟವಾಡುತ್ತಿದ್ದ ವೇಳೆ ಕುಸಿದು ಬಿದ್ದು ಸಾವನ್ನಪ್ಪಿದ ಧಾರುಣ ಘಟನೆ ಕಾಸರಗೋಡಿನ ಮಂಜೇಶ್ವರದಲ್ಲಿ ನಡೆದಿದೆ.
ಮೃತ ಯುವಕನನ್ನು ಉಪ್ಪಳ ಜೋಡುಕಲ್ಲು ಕಯ್ಯಾರು ನಿವಾಸಿ ನಾರಾಯಣ ಎಂಬುವವರ ಪುತ್ರ ಪದ್ಮನಾಭ ಎಂದು ಗುರುತಿಸಲಾಗಿದೆ.
ಪದ್ಮನಾಭ ಸ್ಥಳೀಯ ಮೀಯಪದವು ಶಾಲಾ ಮೈದಾನದಲ್ಲಿ ನಡೆಯುತ್ತಿದ್ದ ಕ್ರಿಕೆಟ್ ಪಂದ್ಯಾಟಕ್ಕೆ ದೇರಂಬಲ ತಂಡದ ಆಟಗಾರನಾಗಿ ತೆರಳಿದ್ದರು.
ಓವರಿನ ಕೊನೆಯ ಒಂದು ಎಸೆತದ ವೇಳೆ ಪದ್ಮನಾಭ ಕ್ರಿಕೆಟ್ ಮೈದಾನಿನಲ್ಲೇ ಕುಸಿದು ಬಿದ್ದಿದ್ದಾರೆ.
ಕೂಡಲೇ ಜೊತೆ ಆಟಗಾರರು ಈತನನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲು ಕೊಂಡೊಯ್ಯುವಷ್ಟರಲ್ಲಿ ದಾರಿ ಮಧ್ಯೆ ಸಾವನ್ನಪ್ಪಿದ್ದಾರೆ.
ವಿಡಿಯೋಗಾಗಿ…
You must be logged in to post a comment Login