Connect with us

    DAKSHINA KANNADA

    ಪುತ್ತೂರಿನಲ್ಲಿ ಪತ್ತೆಯಾದ ಅನ್ಯಕೋಮಿನ ಜೋಡಿ, ಪೋಲೀಸ್ ವಶಕ್ಕೆ ನೀಡಿದ ಹಿಂದೂ ಸಂಘಟನೆ ಕಾರ್ಯಕರ್ತರು…

    ಪುತ್ತೂರು, ಜುಲೈ 21: ಕೆಲಸ ಕೊಡಿಸುವ ನೆಪದಲ್ಲಿ ಪುತ್ತೂರಿಗೆ ಯುವತಿಯೋರ್ವಳನ್ನು ಕರೆ ತಂದ ಅನ್ಯಕೋಮಿನ ಯುವಕನೋರ್ವನನ್ನು ಹಿಂದೂ ಸಂಘಟನೆಯ‌ ಕಾರ್ಯಕರ್ತರು ಯುವತಿಯ ಜೊತೆಗೆ ಪೋಲೀಸ್ ವಶಕ್ಕೆ ನೀಡಿದ್ದಾರೆ.

    ಫೆಸ್ಬುಕ್ ಮೂಲಕ ಯುವತಿಯ ಪರಿಚಯವಾಗಿ ಯುವಕ ಕೆಲಸ ಕೊಡಿಸುವುದಾಗಿ ಆಕೆಯನ್ನು ಪುತ್ತೂರಿಗೆ ಕರೆತಂದಿದ್ದ‌. ಈ ವಿಚಾರವನ್ನು ತಿಳಿದ ಹಿಂದೂ ಸಂಘಟನೆಯ ಕಾರ್ಯಕರ್ತರು ಇಬ್ಬರನ್ನೂ ಪುತ್ತೂರು ನಗರ ಪೋಲೀಸರ ವಶಕ್ಕೆ ನೀಡಿದ್ದಾರೆ.

    ಯುವಕ ಕಡಬ ತಾಲೂಕಿನ ಸವಣೂರಿನ ಅಶ್ರಫ್ ಎಂದು ಗುರುತಿಸಲಾಗಿದ್ದು, ನಗರ ಪೋಲೀಸರು ಇಬ್ಬರನ್ನೂ ವಿಚಾರಣೆ ನಡೆಸುತ್ತಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply