LATEST NEWS
ಸರ್ಕಾರ ಸುಭದ್ರವಾಗಿದೆ, ಬಿಜೆಪಿ ಕುತಂತ್ರ ಫಲಿಸಲ್ಲ -ಖಾದರ್ ವಾಗ್ದಾಳಿ
ಸರ್ಕಾರ ಸುಭದ್ರವಾಗಿದೆ, ಬಿಜೆಪಿ ಕುತಂತ್ರ ಫಲಿಸಲ್ಲ -ಖಾದರ್ ವಾಗ್ದಾಳಿ
ಮಂಗಳೂರು, ಸೆಪ್ಟೆಂಬರ್ 23 : ಮುಖ್ಯಮಂತ್ರಿ ಕುಮಾರ ಸ್ವಾಮೀ ನೇತ್ರತ್ವದ ರಾಜ್ಯ ಸರ್ಕಾರ ಸುಭದ್ರವಾಗಿದೆ. ಸರ್ಕಾರಕ್ಕೆ ಯಾವುದೇ ತೊಂದರೆ ಇಲ್ಲ.
ಬಿಜೆಪಿ ಅನವಶ್ಯವಾಗಿ ಗೊಂದಲಗಳನ್ನು ಸೃಷ್ಟಿಸಿ ಜನರ ಹಾದಿ ತಪ್ಪಿಸುತ್ತಿದೆ ಎಂದು ರಾಜ್ಯ ವಸತಿ ಮತ್ತು ನಗರಾಭಿವೃದ್ದಿ ಸಚಿವ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಆರೋಪಿಸಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಬಿಜೆಪಿ ನಾಯಕರು ಅನವಶ್ಯಕವಾಗಿ ರಾಜ್ಯದ ಜನರ ದಿಕ್ಕು ತಪ್ಪಿಸುತ್ತಿದೆ.
ಮುಖ್ಯಮಂತ್ರಿ ಕುಮಾರ ಸ್ವಾಮೀ ನೇತ್ರತ್ವದ ರಾಜ್ಯ ಸರ್ಕಾರ ಸುಭದ್ರವಾಗಿದೆ. ಸರ್ಕಾರಕ್ಕೆ ಯಾವುದೇ ತೊಂದರೆ ಇಲ್ಲ ಎಂದು ಹೇಳಿದರು.
ಪ್ರತಿಪಕ್ಷದ ಜವಾಬ್ದಾರಿ ಇರುವ ಬಿಜೆಪಿ ಸಲಹೆ ಸೂಚನೆ ಕೊಡಬೇಕಾದ ಬಿಜೆಪಿಗೆ ಅಧಿಕಾರ ಸಲಹೆ ಸೂಚನೆಗಳನ್ನು ಕೊಡಬೇಕಿತ್ತು.
ಅದನ್ನು ಮಾಡುವ ಬದಲು ಸರ್ಕಾರದ ಜನಪ್ರಿಯ ಯೋಜನೆಗಳ ದಿಕ್ಕು ತಪ್ಪಿಸುತ್ತಿದೆ ಎಂದು ಆರೋಪಿಸಿದರು.
ಇದು ಬಿಜೆಪಿಯವರ ರಾಜಕೀಯ ಸಂಸ್ಕ್ರತಿಯನ್ನು ತೋರಿಸಿದೆ.
ಇದರಲ್ಲಿ ಬಿಜೆಪಿ ಯಶಸ್ವಿಯಾಗೋದಿಲ್ಲ, ಹೈದರಾಬಾದ್ ರೆಸಾರ್ಟ್ ನಲ್ಲಿ ಶಾಸಕರು ಕೂರುವ ಅಗತ್ಯ ಇಲ್ಲ.
ರಾಜೀನಾಮೆ ಕೊಡೋಕೆ ರಾಜ ಭವನಕ್ಕೆ ಬರಲೇ ಬೇಕು ಎಂದು ಸಚಿವ ಖಾದರ್ ಅವರು ಬಿಜೆಪಿ ಮೇಲೆ ಹರಿಹಾಯ್ದರು.
You must be logged in to post a comment Login