Connect with us

    DAKSHINA KANNADA

    ನದಿಗೆ ಕಸ ಬಿಸಾಡಿ ವೈರಲ್ ಆಗಿದ್ದ ಕಾರ್ ನ ಸೀಜ್ ಮಾಡಿದ ಪೋಲಿಸರು

    ಮಂಗಳೂರು, ಮೇ 2: ಮಂಗಳೂರಿನ ಉಳ್ಳಾಲ ನೇತ್ರಾವತಿ ಸೇತುವೆಯಲ್ಲಿ ಇಂದು ಬೆಳಗ್ಗೆ ಕಾರಲ್ಲಿ ಬಂದು ಕಸ ಎಸೆದ ವಿಡಿಯೋ ವೈರಲ್ ಆದ ಬಳಿಕ ಪೊಲೀಸರು ಕಾರನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ.

    ಶನಿವಾರ ಮುಂಜಾನೆ ನೇತ್ರಾವತಿ ಸೇತುವೆ ಮೇಲೆ ಕಾರನ್ನು ನಿಲ್ಲಿಸಿ ಅದರಿಂದ ಇಳಿದ ಇಬ್ಬರು ಮಹಿಳೆಯರು ಕಸವನ್ನು ಸೇತುವೆ ಮೇಲಿಂದ ನದಿಗೆ ಎಸೆದಿದ್ದಾರೆ. ಇದರ ವಿಡಿಯೋವನ್ನು ಹಿಂಬದಿಯಲ್ಲಿ ಇದ್ದ ವಾಹನದವರು ಚಿತ್ರೀಕರಿಸಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ವಿಡಿಯೋದಲ್ಲಿ ಕಾರಿನ ನೋಂದಣಿ ಸಂಖ್ಯೆ ಸ್ಪಷ್ಟವಾಗಿ ಕಾಣಿಸಿತ್ತು.

    ಈ ಸಂಬಂಧ ಮಂಗಳೂರು ಮಹಾನಗರ ಪಾಲಿಕೆಯ ಹಿರಿಯ ಆರೋಗ್ಯ ನಿರೀಕ್ಷಕರು ಕಂಕನಾಡಿ ಠಾಣೆಗೆ ದೂರನ್ನು ನೀಡಿದ್ದು, ಪೊಲೀಸರು ಮಧ್ಯಾಹ್ನದ ವೇಳೆಗೆ ಕಾರನ್ನು ವಶಪಡಿಸಿಕೊಂಡು ಕಾರಿನಲ್ಲಿದ್ದವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ವಿಡಿಯೋ ದೃಶ್ಯದಲ್ಲಿರುವಂತೆ ಅವರು ಮಾಸ್ಕ್ ಕೂಡ ಹಾಕದೆ ಇರುವುದರಿಂದ ಆ ಕುರಿತು ಕೂಡ ಪ್ರಕರಣ ದಾಖಲಿಸಲಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply