Connect with us

    LATEST NEWS

    ದೈವಸ್ಥಾನ ಆವರಣಗೊಡೆ ಕುಸಿದು ವಿಧ್ಯಾರ್ಥಿನಿ ಸಾವು

    ದೈವಸ್ಥಾನ ಆವರಣಗೊಡೆ ಕುಸಿದು ವಿಧ್ಯಾರ್ಥಿನಿ ಸಾವು

    ಉಡುಪಿ ಜೂನ್ 29: ಉಡುಪಿ ಜಿಲ್ಲೆಯಾದ್ಯಂತ ಸುರಿಯುತ್ತಿರುವ ಭಾರಿ ಮಳೆಗೆ ಆವರಣ ಗೊಡೆಯೊಂದು ಕುಸಿದು ಬಿದ್ದು ವಿಧ್ಯಾರ್ಥಿನಿಯೊಬ್ಬಳು ಮೃತಪಟ್ಟ ಘಟನೆ ನಡೆದಿದೆ.

    ಉಡುಪಿಯ ಬೈಂದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು ಮೃತ ವಿಧ್ಯಾರ್ಥಿನಿಯನ್ನು ಧನ್ಯ ಎಂದು ಗುರುತಿಸಲಾಗಿದೆ, ಈಕೆ ಎಂಎಸ್ಸಿ ಸ್ಟಾಟಿಕ್ಸ್ ವಿಧ್ಯಾರ್ಥಿನಿಯಾಗಿದ್ದಳು.

    ಬೈಂದೂರು ತಾಲೂಕಿನ ಉಳ್ಳೂರಿನಲ್ಲಿ ನಂದಿಕೇಶ್ವರ ದೈವಸ್ಥಾನದ ಆವರಣ ಗೋಡೆ ಸಮೀಪ ನಡೆದು ಹೋಗುತ್ತಿರುವಾಗ ಆವರಣಗೊಡೆ ಏಕಾಏಕಿ ಕುಸಿದು ಬಿದ್ದಿದೆ, ಈ ಸಂದರ್ಭದಲ್ಲಿ ಸ್ಥಳದಲ್ಲೇ ನಡೆದು ಹೋಗುತ್ತಿದ್ದ ವಿಧ್ಯಾರ್ಥಿನಿ ಧನ್ಯ ಮೇಲೆ ಆವರಣ ಗೋಡೆ ಕುಸಿದು ಬಿದ್ದಿದ್ದು, ವಿಧ್ಯಾರ್ಥಿನಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಘಟನೆ ಸಂಬಂಧಿಸಿದಂತೆ ಬೈಂದೂರು ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply