LATEST NEWS
ತಲವಾರು ಹಿಡಿದು ಕಾಲೇಜು ಆವರಣದಲ್ಲಿ ಕಿಡಿಗೇಡಿಗಳ ದಾಂಧಲೆ
ಮಂಗಳೂರು ಫೆಬ್ರವರಿ 02: ನಗರದ ಬಳ್ಳಾಲ್ ಬಾಗ್ ಸಮೀಪದ ಕಾಲೇಜ್ ಆವರಣದಲ್ಲಿ ಹುಡುಗರ ಗುಂಪೊಂದಪು ತಲವಾರ್ ಹಿಡಿದು ದಾಂಧಲೆ ನಡೆಸಿದ ಘಟನೆ ನಡೆದಿದೆ.
ವಿಧ್ಯಾರ್ಥಿಗಳ ವಾಹನಗಳ ನಡುವೆ ಢಿಕ್ಕಿಯಾದ ವಿಚಾರದ ಬಗ್ಗೆ ವಿದ್ಯಾರ್ಥಿಗಳ ನಡುವೆ ಮಾತಿನ ಚಕಮಕಿ ನಡೆದಿತ್ತು. ನಂತರ ಸ್ವಲ್ಪಸಮಯದ ನಂತರ ಯುವಕರ ತಂಡವೊಂದು ತಲವಾರು ಸಮೇತ ಕಾಲೇಜು ಬಳಿ ಆಗಮಿಸಿ ಕೆಲವು ವಿದ್ಯಾರ್ಥಿಗಳಿಗಾಗಿ ಹುಡುಕಾಟ ನಡೆಸಿದೆ ಎಂದು ಹೇಳಲಾಗುತ್ತಿದೆ.
ತಲವಾರ್ ಹಿಡಿದು ಕಾಲೇಜಿಗೆ ಬಂದ ಕಿಡಿಗೇಡಿಗಳ ವಿಡಿಯೋವನ್ನು ವಿದ್ಯಾರ್ಥಿಗಳು ರೆಕಾರ್ಡ್ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಘಟನೆ ಬರ್ಕೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ವಿಚಾರಣೆ ನಡೆಸಿದ್ದಾರೆ.
You must be logged in to post a comment Login