DAKSHINA KANNADA
ಮಂಗಳೂರಿನಲ್ಲಿ ಮೂವರು ಮಹಿಳೆಯರ ಮೇಲೆ ತಲ್ವಾರ್ ದಾಳಿ: ಓರ್ವ ಗಂಭೀರ
ಮಂಗಳೂರು, ಸೆಪ್ಟೆಂಬರ್ 20: ನಗರದ ಕೇಂದ್ರ ಕಾರಾಗೃಹದ ಬಳಿ ಇರುವ ಡಯಟ್ ನಲ್ಲಿ ಮೂವರು ಮಹಿಳೆಯರ ಮೇಲೆ ಅಪರಿಚಿತನಿಂದ ತಲ್ವಾರ್ ದಾಳಿ ನಡೆದ ಬಗ್ಗೆ ವರದಿಯಾಗಿದೆ.
ನಿರ್ಮಾಲ, ರಿನಾ ರಾಯ್, ಗುಣವತಿ ದಾಳಿಗೊಳಗಾದವರು. ಕರಂಗಲಪಾಡಿಯ ಡಯಟ್ ಹೆಸರಿನ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಒಳಗೆ ಈ ಘಟನೆ ನಡೆದಿದ್ದು, ನಿರ್ಮಲ ಎನ್ನುವವರ ಸ್ಥಿತಿ ಗಂಭೀರವಾಗಿದೆ. ಸದ್ಯ ಗಾಯಾಳುಗಳನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬರ್ಕೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಮಂಗಳೂರು ನಗರ ಪೊಲೀಸ್ ಆಯುಕ್ತ ಸ್ಥಳಕ್ಕೆ ಭೇಟಿ ನೀಡಿದ್ದಾರೆ.
ಸೋಮವಾರ ಮಧ್ಯಾಹ್ನ 12.45ರ ಸುಮಾರಿಗೆ ಮಂಗಳೂರಿನ ಕಾರಾಗೃಹದ ಪಕ್ಕದ ಕಾಂಪೌಂಡ್ ನಲ್ಲಿರುವ ಡಯಟ್ ಕಚೇರಿಗೆ ಬಂದ ಸುಮಾರು 35 ವರ್ಷದ ಯುವಕ, ಟೀಚರ್ ಒಬ್ಬರ ಹೆಸರು ತೆಗೆದು ಅವರಿದ್ದಾರೆಯೇ ಎಂದು ವಿಚಾರಿಸಿದ್ದಾನೆ. ಟೀಚರ್ಗೆ ಗಿಫ್ಟ್ ಕೊಡಲಿಕ್ಕಿದೆ ಎಂದು ಹೇಳಿದ್ದಾನೆ. ಸಿಬ್ಬಂದಿ ಆ ಬಗ್ಗೆ ಮಾಹಿತಿ ಇಲ್ಲದೆ ಯಾರು ಎಂದು ಯೋಚಿಸುತ್ತಿರುವಂತೆಯೇ, ಯುವಕ ಏಕಾಏಕಿ ಮಚ್ಚು ಹೊರತೆಗೆದು ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ.
ಮಹಿಳೆಯರ ಕಿರುಚಾಟ ಕೇಳಿ ಸಾರ್ವಜನಿಕರು, ಜೈಲಿನ ಸಿಬ್ಬಂದಿಗಳು ಓಡಿ ಬಂದಿದ್ದು, ಯುವಕನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಮೇಲ್ನೋ ಟಕ್ಕೆ ಈ ಘಟನೆ ಯಾಕೆ ಸಂಭವಿಸಿದೆ ಎಂದು ತಿಳಿದುಬಂದಿಲ್ಲ. ಯುವಕ ಯಾರು, ಈ ರೀತಿ ಯಾಕೆ ಮಾಡಿದ ಎಂದು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಆಯುಕ್ತ ಶಶಿಕುಮಾರ್ ಹೇಳಿದ್ದಾರೆ.
You must be logged in to post a comment Login