Connect with us

    LATEST NEWS

    ತಾಲೂಕು ಮಟ್ಟದಲ್ಲಿ 6 ದಿನ ಆಧಾರ್ ಅದಾಲತ್

    ತಾಲೂಕು ಮಟ್ಟದಲ್ಲಿ 6 ದಿನ ಆಧಾರ್ ಅದಾಲತ್

    ಮಂಗಳೂರು ಜುಲೈ 13: ಆಧಾರ್ ನೋಂದಣಿಗಾಗಿ ಸಾರ್ವಜನಿಕರು ಜಿಲ್ಲೆಯ ವಿವಿಧ ಕಚೇರಿಯಲ್ಲಿ ಇನ್ನೂ ನೋಂದಣಿಯಾಗದೆ ಇರುವ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವ ದೃಷ್ಟಿಯಿಂದ ಜಿಲ್ಲೆಯ ತಾಲೂಕು ಮಟ್ಟದಲ್ಲಿ 6 ದಿನಗಳ ಕಾಲ ಆಧಾರ್ ಅದಾಲತ್‍ನ್ನು ಆಯೋಜಿಸಲಾಗಿದೆ.

    ಜುಲೈ 16 ರಿಂದ 21 ರವರೆಗೆ ಬಂಟ್ವಾಳ ತಾಲೂಕು ಪಂಚಾಯತ್ ಬಳಿ ಸಾಮರ್ಥ್ಯ ಸೌಧ, ಜುಲೈ 23 ರಿಂದ 28 ರವರೆಗೆ ಬೆಳ್ತಂಗಡಿ ತಾಲೂಕು ಕಚೇರಿಯ ಹಳೆ ಕಟ್ಟಡ, ಜುಲೈ 30 ರಿಂದ ಆಗಸ್ಟ್ 4 ರವರೆಗೆ ಸಮುದಾಯ ಭವನ ಪುತ್ತೂರು, ಆಗಸ್ಟ್ 6 ರಿಂದ 11 ರವರೆಗೆ ಸುಳ್ಯ ತಾಲೂಕು ಕಚೇರಿ ಪಡಸಾಲೆಯಲ್ಲಿ ಆಯೋಜಿಸಲಾಗಿದೆ.

    ಈ ಅದಾಲತ್‍ನಲ್ಲಿ ನೋಂದಣಿಗಾಗಿ ಬರುವ ಸಾರ್ವಜನಿಕರು ಎಲ್ಲಾ ಪೂರಕ ದಾಖಲೆಗಳೊಂದಿಗೆ ಹಾಜರಾಗಿ ಆಧಾರ್‍ನಲ್ಲಿ ಹೆಸರನ್ನು ನೋಂದಾಯಿಸಿಕೊಳ್ಳಲು ಪ್ರಕಟಣೆ ತಿಳಿಸಿದೆ.

    Share Information
    Advertisement
    Click to comment

    You must be logged in to post a comment Login

    Leave a Reply