Connect with us

    LATEST NEWS

    ಬೆದರಿಕೆ ಕರೆಗಳಿಗೆ ನಾನು ಜಗ್ಗಲ್ಲ – ತಾಕತ್ತಿದ್ದರೆ ನನ್ನ ಸಮಾಜಸೇವೆಯನ್ನು ನಿಲ್ಲಿಸಿ – ತಬಸ್ಸುಮ್

    ಉಡುಪಿ ಸೆಪ್ಟೆಂಬರ್ 24: ನಾನು ಕಳೆದ 15 ವರ್ಷಗಳಿಂದ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದೇನೆ. ನನ್ನ ಬೆಳವಣಿಗೆ ಸಹಿಸಲಾಗದ ಕೆಲವರು ಫೋನ್ ಮಾಡಿ ಬೆದರಿಕೆ ಕರೆ ಗಳನ್ನು ಹಾಕುತ್ತಿದ್ದು. ನಾನು ಯಾವುದಕ್ಕೂ ಜಗ್ಗುವುದಿಲ್ಲ ಎಂದು ರಾಜ್ಯ ಅಲ್ಪಸಂಖ್ಯಾತ ಹಿತರಕ್ಷಣಾ ವೇದಿಕೆ ಮಹಿಳಾ ಘಟಕದ ಉಡುಪಿ ಜಿಲ್ಲಾಧ್ಯಕ್ಷೆ ತಬಸ್ಸುಮ್ ಹೇಳಿದ್ದಾರೆ.

    ಉಡುಪಿಯಲ್ಲಿ ಮಾತನಾಡಿದ ಅವರು ಅಲ್ಪಸಂಖ್ಯಾತರಿಗೆ ಸರ್ಕಾರದಿಂದ ಸಿಗುವ ಸವಲತ್ತುಗಳನ್ನು ತಿಳಿಸಿಕೊಡುವಲ್ಲಿ ನಾನು ಸಹಾಯ ಮಾಡುತ್ತಿದ್ದೇನೆ. ಆಧಾರ್ ಕಾರ್ಡ್, ಪಾನ್ ಕಾರ್ಡ್ ಸರಕಾರದ ಸಹಾಯಧನಗಳನ್ನು ಜನರಿಗೆ ತಲುಪಿಸುವ ಸೇವೆ ನೀಡುತ್ತಿದ್ದೇನೆ. ಈ ಚಟುವಟಿಕೆಗಳಿಗೆ ನನ್ನದೇ ಧರ್ಮದ ಕೆಲವರಿಂದ ಬೆದರಿಕೆಯಿದೆ ಎಂದು ತಬಸ್ಸುಮ್ ಆರೋಪ ಮಾಡಿದ್ದಾರೆ.

    17 ವರ್ಷಗಳ ಹಿಂದೆ ಮದುವೆಯಾಗಿ ಶಿವಮೊಗ್ಗದಿಂದ ಉಡುಪಿಗೆ ಆಗಿದ್ದೇನೆ ನಾನೀಗ ಉಡುಪಿಯ ವಾಸಿ. ಬೆದರಿಕೆಗಳಿಗೆ ಜಗ್ಗುವುದಿಲ್ಲ. ಕಷ್ಟದಲ್ಲಿರುವವರಿಗೆ ನಾನು ನಿರಂತರ ಸಹಾಯ ಮಾಡುತ್ತೇನೆ ನಿಮಗೆ ತಾಕತ್ತಿದ್ದರೆ ನನ್ನ ಸಮಾಜಸೇವೆಯನ್ನು ನಿಲ್ಲಿಸಿ ಎಂದು ಸವಾಲ್ ಹಾಕಿದ್ದಾರೆ. ಫೋನ್ ಕರೆ ಮಾಡಿದವರ ಹೆಸರು ವಿಳಾಸ ಪತ್ತೆ ಮಾಡಿ, ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸುವುದಾಗಿ ಹೇಳಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply