LATEST NEWS
ಸುರತ್ಕಲ್ – ಸಾಲದ ಹೊರೆ ಸಮುದ್ರಕ್ಕೆ ಹಾರಿ ಜೀವ ಕಳೆದುಕೊಂಡ ಯುವಕ
ಸುರತ್ಕಲ್: ತನ್ನ ಫ್ರೆಂಡ್ಸ್ ಗಳಿಂದ ಪಡೆದ ಸಾಲವನ್ನು ಮರುಪಾವತಿ ಮಾಡಲು ಸಾಧ್ಯವಾಗದೆ ಯುವಕನೋರ್ವ್ ಸಮುದ್ರಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಸುರತ್ಕಲ್ ಮಲ್ಲಮಾರ್ ಬೀಚ್ ನಲ್ಲಿ ನಡೆದಿದೆ.,
ಮೃತನನ್ನು ಕಾಟಿಪಳ್ಳ ನಿವಾಸಿ ಕ್ಯಾಂಡ್ರಿಕ್ ಲಾರೆನ್ಸ್ ಡಿ’ಸೋಜಾ (20) ಎಂದು ಗುರುತಿಸಲಾಗಿದೆ. ಸೋಮವಾರ ಬೆಳಿಗ್ಗೆ ಮನೆಯಿಂದ ಹೊರಟಿದ್ದ ಯುವಕ ಮನೆಗೆ ಬರದ ಹಿನ್ನಲೆ ತಾಯಿ ಹುಡುಕಾಟ ನಡೆಸಿದಾಗ ಡೆತ್ನೋಟ್ ಪತ್ತೆಯಾಗಿತ್ತು. ಕೂಡಲೇ ಹುಡುಕಾಡಿದರೂ ಪತ್ತೆಯಾಗಲಿಲ್ಲ. 3 ಗಂಟೆಯ ಹೊತ್ತಿಗೆ ಅವರ ಮೃತದೇಹ ಸುರತ್ಕಲ್ ಬೀಚ್ ಬಳಿ ಕಂಡುಬಂದಿದೆ.
You must be logged in to post a comment Login