Connect with us

    LATEST NEWS

    ಹೆಂಡತಿಯ ಬರ್ತಡೇ ಮುಗಿಸಿ ಹೊರ ಬಂದವನನ್ನು ಕೊಚ್ಚಿಕೊಂದ ಸ್ನೇಹಿತರು…!!

    ಮಂಗಳೂರು: ಸುರತ್ಕಲ್ ನ ಬೈಕಂಪಾಡಿಯಲ್ಲಿ ದುಷ್ಕರ್ಮಿಗಳ ತಲ್ವಾರ್ ದಾಳಿಗೆ ಗಂಭೀರವಾಗಿ ಗಾಯಗೊಂಡಿದ್ದ ರೌಡಿ ಶೀಟರ್ ರಾಜಾ ಯಾನೆ ರಾಘವೇಂದ್ರ ಬಂಗೇರ(28) ಚಿಕಿತ್ಸೆ ಫಲಕಾರಿಯಾಗದೇ ಸಾವನಪ್ಪಿದ್ದಾನೆ.


    ರಾಜ ಯಾನೆ ರಾಘವೇಂದ್ರ ರೌಡಿಶೀಟರ್ ಆಗಿದ್ದು, ಸೋಮವಾರ ಸಂಜೆ ತನ್ನ ಪತ್ನಿಯ ಹುಟ್ಟುಹಬ್ಬ ಹಿನ್ನಲೆ ಮನೆಯಲ್ಲಿ ಕೇಕ್ ಕತ್ತರಿಸಿ ಸಂಭ್ರಮ ಆಚರಿಸಿದ್ದ, ಬಳಿಕ ಮನೆಯಿಂದ ಹೊರಗೆ ಬಂದಿದ್ದ ರಾಘವೇಂದ್ರನ್ನು ಬೈಕಂಪಾಡಿಯ ಮೀನಕಳಿಯಲ್ಲಿ ಬೈಕ್​​ನಲ್ಲಿ ಬಂದ ಇಬ್ಬರು ಈತನ ಮೇಲೆ ತಲವಾರು ಮತ್ತು ಚೂರಿಗಳಿಂದ ಹಲ್ಲೆ ನಡೆಸಿದ್ದರು. ಹಲ್ಲೆಯಿಂದ ಈತನ ಮುಖ, ತಲೆ ಮತ್ತು ಕೈಗೆ ಗಂಭೀರ ಗಾಯವಾಗಿತ್ತು. ಈತನನ್ನು ನಗರದ ಎ ಜೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ರಾತ್ರಿ ಚಿಕಿತ್ಸೆ ಫಲಕಾರಿಯಾಗದೆ ಈತ ಸಾವನ್ನಪ್ಪಿದ್ದಾನೆ.

     

    Share Information
    Advertisement
    Click to comment

    You must be logged in to post a comment Login

    Leave a Reply