DAKSHINA KANNADA
ರಸ್ತೆ ಬದಿ ಹಾಡುತ್ತಿದ್ದ ಮಕ್ಕಳಿಗೆ ಧನ ಸಹಾಯ ಮಾಡಿದ ಸೂಪರ್ ಸ್ಟಾರ್ ಉಪೇಂದ್ರ
ರಸ್ತೆ ಬದಿ ಹಾಡುತ್ತಿದ್ದ ಮಕ್ಕಳಿಗೆ ಹಣ ಸಹಾಯ ಮಾಡಿದ ಸೂಪರ್ ಸ್ಟಾರ್ ಉಪೇಂದ್ರ
ಮಂಗಳೂರು ಡಿಸೆಂಬರ್ 05: ಕನ್ನಡದ ಸೂಪರ್ ಸ್ಟಾರ್ ಉಪೇಂದ್ರ ಅಂಧ ಮಕ್ಕಳಿಗೆ ಸಹಾಯ ಹಸ್ತ ನೀಡಿ ಮಾನವೀಯತೆ ಮೆರೆದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಉಜಿರೆಯಲ್ಲಿ ನಡೆದಿದೆ.
ದಕ್ಷಿಣಕನ್ನಡ ಜಿಲ್ಲೆಯ ಉಜಿರೆಯಲ್ಲಿ ರಸ್ತೆ ಬದಿಯಲ್ಲಿ ಅಂಧ ಮಕ್ಕಳ ಸಹಾಯ ರಥದ ಮಕ್ಕಳು ಹಾಡು ಹಾಡುತ್ತಾ ದೇಣಿಗೆ ಸಂಗ್ರಹಿಸುತ್ತಿದ್ದರು.
ಇದೇ ಸಂದರ್ಭದಲ್ಲಿ ಈ ಮಾರ್ಗವಾಗಿ ಸಾಗುತ್ತಿದ್ದ ಸೂಪರ್ ಸ್ಟಾರ್ ಉಪೇಂದ್ರ ಮಕ್ಕಳ ಹಾಡು ಕೇಳಿ ತಕ್ಷಣ ಕಾರು ನಿಲ್ಲಿಸಿದ್ದಾರೆ.
ನಂತರ ಹಾಡುತ್ತಿದ್ದ ಮಕ್ಕಳ ಬಳಿಗೆ ಬಂದ ನಟ ಉಪೇಂದ್ರ ಅಂಧ ಮಕ್ಕಳ ಸಂಗೀತಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ.
ನಂತರ ಅಂಧ ಮಕ್ಕಳ ಸಹಾಯಕ್ಕೆ ಮೂರು ಸಾವಿರ ರೂಪಾಯಿ ಹಣ ನೀಡಿ ಮಾನವೀಯತೆ ಮೆರೆದಿದ್ದಾರೆ.
ಅಂಧ ಮಕ್ಕಳು ರಸ್ತೆ ಬದಿ ಹಾಡಿದರೂ ಮುಖ ತಿರುಗಿಸಿಕೊಂಡು ಹೋಗುವ ಇಂದಿನ ಕಾಲದಲ್ಲಿ ಒಬ್ಬ ಸ್ಟಾರ್ ನಟನು ಅಂಧ ಮಕ್ಕಳ ಹಾಡಿಗೆ ಮೆಚ್ಚಿ ಹಣ ನೀಡಿದ್ದು ಅಂಧ ಕಲಾವಿದರಿಗೆ ಖುಷಿ ತಂದಿದೆ.
ಯಾವುದೇ ಅಹಂಕಾರ ಇಲ್ಲದೆ ಮಕ್ಕಳ ಜೊತೆ ಉಪೇಂದ್ರ ತೋರಿದ ಪ್ರೀತಿಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
You must be logged in to post a comment Login