LATEST NEWS
ಪವರ್ ಫುಲ್ ಖಾತೆ ಸಿಕ್ಕಿದ್ದಕ್ಕೆ ಸುನಿಲ್ ಕುಮಾರ್ ಖುಷ್ – ದೊಡ್ಡ ಜವಾಬ್ದಾರಿಯನ್ನು ಮುಖ್ಯಮಂತ್ರಿಗಳು ನನಗೆ ಕೊಟ್ಟಿದ್ದಾರೆ
ಉಡುಪಿ ಅಗಸ್ಟ್ 07 : ರಾಜ್ಯ ಸರಕಾರದಲ್ಲಿ ಹೊಸತನ ನಿರ್ಮಾಣವಾಗ ಬೇಕು ಎನ್ನುವ ಉದ್ದೇಶದಿಂದ ದೊಡ್ಡ ಜವಬ್ದಾರಿಯನ್ನು ನೀಡಿದ್ದಾರೆ. ಹೊಸತನದ ರೂಪದಲ್ಲಿ ಕೆಲಸ ಕಾರ್ಯಗಳನ್ನು ನಾವು ಮಾಡುತ್ತೇವೆ ಎಂದು ಇಂಧನ, ಕನ್ನಡ ಸಂಸ್ಕೃತಿ ಸಚಿವ ಸುನೀಲ್ ಕುಮಾರ್ ಹೇಳಿದ್ದಾರೆ.
ಉಡುಪಿಯಲ್ಲಿ ಮಾತನಾಡಿದ ಅವರು ಇಲಾಖೆಯ ಬಗ್ಗೆ ಯಾವುದೇ ನಿರೀಕ್ಷೆ ಬೇಡಿಕೆ ಒತ್ತಡ ಒತ್ತಾಯ ಹಾಕಿರಲಿಲ್ಲ, ಯಾವುದೇ ಹೊಣೆಗಾರಿಕೆ ಕೊಟ್ಟರು ನಿರ್ವಹಿಸುತ್ತೇನೆ ಎಂದಿದ್ದೆ. ಪಕ್ಷಕ್ಕೆ ಮತ್ತು ಸರಕಾರಕ್ಕೆ ಒಳ್ಳೆಯ ಹೆಸರನ್ನು ತರುವ ಪ್ರಯತ್ನ ಮಾಡುತ್ತೇನೆ, ಪಾರ್ಟಿಯ ಎಲ್ಲ ಹಿರಿಯರು ಮತ್ತು ಮುಖ್ಯಮಂತ್ರಿಗಳು ದೊಡ್ಡ ಜವಾಬ್ದಾರಿಯನ್ನು ಕೊಟ್ಟಿದ್ದಾರೆ. ಇಂಧನ ಉತ್ಪಾಧನೆ, ಕನ್ನಡವನ್ನು ಸಂಸ್ಕೃತಿಯನ್ನು ಕಲಿಸುವ ಜವಾಬ್ದಾರಿ ಕೊಟ್ಟಿದ್ದಾರೆ .ಹಿರಿಯರು ಮತ್ತು ತಜ್ಞರ ಅಭಿಪ್ರಾಯ ಪಡೆದು ಜವಾಬ್ದಾರಿ ನಿರ್ವಹಿಸುತ್ತೇನೆ ಎಂದರು.
You must be logged in to post a comment Login