ಸುಳ್ಯ: ಶುಕ್ರವಾರ ಸುರಿದ ಭಾರಿ ಮಳೆಯ ಮಧ್ಯೆ ಸುಳ್ಯದ ಪರಿವಾರಕಾನ ಉಡುಪಿ ಗಾರ್ಡನ್ ಹೋಟೆಲ್ ಮುಂಭಾಗದಲ್ಲಿ ಬಾವಿ ಗಾತ್ರದಲ್ಲಿ ಭೂಮಿ ಇದ್ದಕ್ಕಿದ್ದಂತೆ ಕುಸಿದು ನಿರ್ಮಾಣವಾದ ಘಟನೆಗೆ ನೆಲದೊಳಗಿದ್ದ ಮೋರಿ ಕುಸಿತ ಕಾರಣ ಎಂದು ತಿಳಿದು ಬಂದಿದೆ.

ಕುಸಿತದ ವೇಳೆ ಬೃಹತ್ ಗಾತ್ರದಲ್ಲಿ ಗುಂಡಿ ನಿರ್ಮಾಣವಾಗಿತ್ತು. ಪಕ್ಕದಲ್ಲೇ ಇದ್ದ ವಿದ್ಯುತ್ ಪರಿವರ್ತಕ ವಾಲಿ ನಿಂತಿದ್ದು ಕೆಲವೇ ಹೊತ್ತಿನಲ್ಲಿ ಅದೂ ಮುರಿದು ಧರೆಗುರುಳಿತು. ಈ ವೇಳೆ ಕರೆಂಟ್ ಸರಬರಾಜು ಇಲ್ಲದ್ದರಿಂದ ಯಾವುದೇ ಅಪಾಯ ಸಂಭವಿಸಲಿಲ್ಲ.

ಅಗ್ನಿಶಾಮಕ ದಳದವರು, ಪೊಲೀಸರು, ಮೆಸ್ಕಾಂನವರು ಸ್ಥಳಕ್ಕೆ ಆಗಮಿಸಿದ್ದರು. ಶನಿವಾರ ಇದರ ತೆರವು ಕಾರ್ಯ ನಡೆಯಿತು. ಪರಿವಾರಕಾನ ಉಡುಪಿ ಗಾರ್ಡನ್ ಹೋಟೆಲ್ ಮುಂಭಾಗದಲ್ಲಿ ಬಾವಿ ಗಾತ್ರದಲ್ಲಿ ಭೂಮಿ ಇದ್ದಕ್ಕಿದ್ದಂತೆ ಕುಸಿದು ಹೊಂಡ ನಿರ್ಮಾಣವಾಗಿರುವುದು.