BANTWAL
ಅರಣ್ಯ ಇಲಾಖೆ ಕಟ್ಟಡ ಸಮೀಪದ ಮರ ಬಿದ್ದು ವಿಧ್ಯಾರ್ಥಿನಿಗೆ ಗಾಯ
ಅರಣ್ಯ ಇಲಾಖೆ ಕಟ್ಟಡ ಸಮೀಪದ ಮರ ಬಿದ್ದು ವಿಧ್ಯಾರ್ಥಿನಿಗೆ ಗಾಯ
ಬಂಟ್ವಾಳ ಜುಲೈ 29: ಅರಣ್ಯ ಇಲಾಖೆಯ ಕಟ್ಟಡದ ಸಮೀಪ ಇರುವ ಮರ ಬಿದ್ದು ಕಾಲೇಜು ವಿದ್ಯಾರ್ಥಿನಿಯೋರ್ವಳಿಗೆ ಕಾಲಿಗೆ ಗಾಯಗಳಾಗಿ ಆಸ್ಪತ್ರೆ ಗೆ ದಾಖಲಾದ ಘಟನೆ ಬಂಟ್ವಾಳ ಪುರಸಭಾ ವ್ಯಾಪ್ತಿಯ ಬೋರುಗುಡ್ಡೆ ಎಂಬಲ್ಲಿ ನಡೆದಿದೆ.
ಕಾಮಾಜೆ ನಿವಾಸಿ ಸೇಸಪ್ಪ ಮೂಲ್ಯ ಅವರ ಮಗಳು ಶಾಲಿನಿ ಮರ ಬಿದ್ದು ಕಾಲಿಗೆ ಗಾಯಗೊಂಡ ವಿದ್ಯಾರ್ಥಿನಿ. ಶಾಲಿನಿ ಅವರು ಬಿಸಿರೋಡಿನ ಗೂಡಿನಬಳಿ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದಾರೆ.
ಸಂಜೆ ವೇಳೆ ಮನೆಗೆ ನಡೆದುಕೊಂಡು ಹೋಗುವ ವೇಳೆ ಹಠಾತ್ ಆಗಿ ಮರ ಬಿದ್ದಿದೆ. ಮರ ಬಿದ್ದ ರಭಸಕ್ಕೆ ರೆಂಬೆಗಳು ವಿಧ್ಯಾರ್ಥಿನಿಯ ಕಾಲಿಗೆ ತಾಗಿ ಗಾಯಗಳಾಗಿದೆ. ಕೂಡಲೇ ವಿಧ್ಯಾರ್ಥಿನಿಯನ್ನು ಅವಳು ಬಿಸಿರೋಡಿನ ಖಾಸಗಿ ಆಸ್ಪತ್ರೆ ಗೆ ದಾಖಲಿಸಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ಧಾಳೆ.
ಮರ ಬಿದ್ದ ಹಿನ್ನಲೆ ಕಾಮಾಜೆ ಕಡೆಗೆ ತೆರಳಲು ಅಸಾಧ್ಯ ವಾಗಿದ್ದರಿಂದ ಕೂಡಲೇ ಸ್ಥಳಕ್ಕೆ ಬಂದ ಅಗ್ನಿಶಾಮಕ ದಳವದವರು ಮರ ತೆರವು ಮಾಡಿದ್ದಾರೆ, ಜೊತೆಗೆ ಅಲ್ಲಿ ಬೀಳುವ ಹಂತದಲ್ಲಿ ದ್ದ ಮತ್ತೊಂದು ಮರವನ್ನು ಕೂಡಾ ತೆರವು ಮಾಡಿದ್ದಾರೆ.
ಮಾಹಿತಿ ತಿಳಿದು ಘಟನಾ ಸ್ಥಳಕ್ಕೆ ಬಂಟ್ವಾಳ ತಹಶೀಲ್ದಾರ್ ರಶ್ಮಿ ಎಸ್.ಅರ್.ಅವರು ಬೇಟಿ ನೀಡಿದ್ದು, ಅಗ್ನಿ ಶಾಮಕ ದಳ ಹಾಗೂ ಪೋಲೀಸರನ್ನು ಕರೆಸಿ ಮರ ತೆರವು ಹಾಗೂ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡರು.
You must be logged in to post a comment Login