Connect with us

    LATEST NEWS

    ಎಸ್ಎಸ್ ಎಲ್ ಸಿ ಹಾಲ್‌ ಟಿಕೆಟ್‌‌ ಪಡೆದುಕೊಳ್ಳಲು ಹೋಗಿದ್ದ ವಿದ್ಯಾರ್ಥಿನಿ ನಾಪತ್ತೆ

    ಮಂಗಳೂರು ಜೂನ್ 22: ಎಸ್ಎಸ್ ಎಲ್ ಸಿ ಪರೀಕ್ಷೆಗೆ ಹಾಲ್‌‌ ಟಿಕೆಟ್‌‌‌‌‌‌ ಪಡೆದುಕೊಳ್ಳಲು ಹೋಗಿದ್ದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿಯೊಬ್ಬಳು ನಾಪತ್ತೆಯಾಗಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ.


    ನಾಪತ್ತೆಯಾದ ವಿದ್ಯಾರ್ಥಿನಿಯನ್ನು ಭೀಮವ್ವ ಅಲಿಯಾಸ್ ಸುಜಾತಾ (16) ಎಂದು ಗುರುತಿಸಲಾಗಿದೆ. ಈಕ ತನ್ನ ಶಾಲೆಯಿಂದ ಪರೀಕ್ಷೆಗೆ ಹಾಲ್‌ ಟಿಕೆಟ್‌ ಪಡೆದುಕೊಂಡು ಮನೆಗೆ ಬರುತ್ತೇನೆ ಎಂದು ತಿಳಿಸಿದ್ದಳು. ಆದರೆ, ಆಕೆ ಮನೆಗೆ ವಾಪಾಸ್ಸಾಗಲಿಲ್ಲ.
    ಸುಜಾತಾ ಮನೆಯಿಂದ ಹೊರಡುವಾಗ ಕೆಂಪು ಬಣ್ಣದ ಚೂಡಿದಾರ ಧರಿಸಿದ್ದಳು. ಆಕೆ 5’1 ಎತ್ತರವಾಗಿದ್ದು, ಸಾಮಾನ್ಯ ಮೈಬಣ್ಣ ಹೊಂದಿದ್ದಾಳೆ. ಉದ್ದನೆಯ ಮುಖ ಹೊಂದಿದ್ದಾಳೆ. ಆಕೆ ಕನ್ನಡ ಹಾಗೂ ತುಳು ಭಾಷೆ ಬಲ್ಲವಳಾಗಿದ್ದಾಳೆ ಎನ್ನಲಾಗಿದೆ.
    ಈ ಬಗ್ಗೆ ಕದ್ರಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ಬಗ್ಗೆ ಮಾಹಿತಿ ತಿಳಿದಲ್ಲಿ ಕೂಡಲೇ ತಿಳಿಸುವಂತೆ ಕದ್ರಿ ಠಾಣಾಧಿಕಾರಿ ಹೇಳಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply