Connect with us

    LATEST NEWS

    ಪಡುಬಿದ್ರಿ – ಅಮಲು ಪದಾರ್ಥ ಸೇವಿಸಿದ್ದ ವಿಧ್ಯಾರ್ಥಿಗಳಿಂದ ರಸ್ತೆ ಮಧ್ಯೆ ಹೊಡೆದಾಟ

    ಉಡುಪಿ ಜನವರಿ 08: ಅಮಲು ಪದಾರ್ಥ ಸೇವಿಸಿ ರಸ್ತೆ ಮಧ್ಯೆ ವಿಧ್ಯಾರ್ಥಿಗಳು ಹೊಡೆದಾಟಕ್ಕೆ ಇಳಿದ ಘಟನೆ ಪಡುಬಿದ್ರಿ ಪೇಟೆಯಲ್ಲಿ ನಡೆದಿದೆ.


    ಚೆನ್ನೈನ ಖಾಸಗಿ ಕಾಲೇಜೊಂದರಲ್ಲಿ ಎಂಬಿಬಿಎಸ್ ಕಲಿಯುತ್ತಿರುವ ವಿಧ್ಯಾರ್ಥಿಗಳು ಎಂದು ಗುರುತಿಸಲಾಗಿದ್ದು. ಸ್ಕೂಟರ್ ನಲ್ಲಿ ಓರ್ವ ಹುಡುಗಿ ಹಾಗೂ ಇಬ್ಬರು ಪ್ರಯಾಣಿಸುತ್ತಿದ್ದು, ಮಾರ್ಗ ಮಧ್ಯೆ ಪೆಟ್ರೋಲ್ ಖಾಲಿಯಾಗಿದ್ದು, ಈ ವಿಚಾರಕ್ಕೆ ಮೂವರು ರಸ್ತೆ ಮಧ್ಯೆ ಗಲಾಟೆಗೆ ನಿಂತಿದ್ದಾರೆ.


    ಅಮಲು ಪದಾರ್ಥ ಸೇವಿಸಿರುವ ವಿದ್ಯಾರ್ಥಿಗಳ ಬೀದಿ ರಂಪಾಟ ಹೆಚ್ಚಾದಾಗ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಪೊಲೀಸರು ಬಂದಾಗ ಪೊಲೀಸರಿಗೆ ನಮ್ಮನ್ನ ಮುಟ್ಟಿದರೆ ಪರಿಣಾಮ ಚೆನ್ನಾಗಿರೋಲ್ಲ ಅಂತ ಅವಾಜ್ ಹಾಕಿದ ವಿಧ್ಯಾರ್ಥಿಗಳು . ಕೊನೆಗೆ ಸಾರ್ವಜನಿಕರ ಸಹಾಯದಿಂದ ವಿಧ್ಯಾರ್ಥಿಗಳನ್ನು ಅಂಬುಲೆನ್ಸ್‌ ಗೆ ತುಂಬಿ ಆಸ್ಪತ್ರೆಗೆ ದಾಖಲಿಸಿದರು. ವಿದ್ಯಾರ್ಥಿಗಳ ಹೈ ಡ್ರಾಮದಿಂದಾಗಿ ಸಾರ್ವನಿಕರಿಗೆ ಪುಕ್ಕಟೆ ಮನರಂಜನೆ ಸಿಕ್ಕಿತು.

    Share Information
    Advertisement
    Click to comment

    You must be logged in to post a comment Login

    Leave a Reply